Date : Monday, 11-03-2024
“ಮಕ್ಕಳು ತನ್ನಲ್ಲಿರುವ ಅಂತಃಶಕ್ತಿಯನ್ನು ಸಾಧನೆಯ ಮೂಲಕ ಕಂಡುಕೊಳ್ಳಬೇಕು” ಒಡಿಯೂರು ಶ್ರೀ ಗುರುವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಒಡಿಯೂರು ಶ್ರೀ ಆಶೀರ್ವಚನ “ಮಕ್ಕಳು ಬಾಹ್ಯ ಪ್ರಲೋಭನೆಗೆ ಒಳಗಾಗದೆ ತನ್ನಲ್ಲಿರುವ ಅಂತಃಶಕ್ತಿಯನ್ನು ಸಾಧನೆಯ ಮೂಲಕ ಕಂಡುಕೊಳ್ಳಬೇಕು. ಧೀರರಾಗಿ, ಧರ್ಮಮಾರ್ಗದಲ್ಲಿ ನಡೆದು ದೇಶಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಜರಗಿದ ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಆಶೀರ್ವಚನ […]
Read More
Date : Monday, 11-03-2024
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.08-03-2024ನೇ ಶುಕ್ರವಾರ ರಾತ್ರಿ ಮಹಾಶಿವರಾತ್ರಿಯ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಆರಾಧ್ಯ ದೇವರಿಗೆ ಶತರುದ್ರಾಭಿಷೇಕ ಸಂಪನ್ನಗೊಂಡಿತು.
Read More
Date : Monday, 11-03-2024
ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶತರುದ್ರಾಭಿಷೇಕ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.08-03-2024ನೇ ಶುಕ್ರವಾರ ರಾತ್ರಿ ಮಹಾಶಿವರಾತ್ರಿಯ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಆರಾಧ್ಯ ದೇವರಿಗೆ ಶತರುದ್ರಾಭಿಷೇಕ ನಡೆಯಲಿರುವುದು.
Read More
Date : Monday, 11-03-2024
“ಅಧ್ಯಾತ್ಮಿಕತೆ ದೇಶದ ಅಂತಃಸತ್ವವಾಗಿದ್ದು, ಧರ್ಮ ತಿರುಳಾಗಿದೆ” ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದ ತುಳುನಾಡ ಜಾತ್ರೆ ಶ್ರೀ ಒಡಿಯೂರು ರಥೋತ್ಸವದ ಧರ್ಮಸಭೆಯಲ್ಲಿ ಪೂಜ್ಯ ಸ್ವಾಮೀಜಿಯವರಿಂದ ಅನುಗ್ರಹ ಸಂದೇಶ ಫೆ.19: “ಜ್ಞಾನ ಶಾಶ್ವತವಾಗಿ ಉಳಿಯುತ್ತದೆ. ಮಾನ ಹೋದರೆ ಮತ್ತೆ ಬರಲಾರದು. ಜ್ಞಾನ ಮತ್ತು ಮಾನಗಳ ಬಗ್ಗೆ ಎಚ್ಚರದಿಂದಿರಬೇಕು. ಪಂಚೇAದ್ರಿಯಗಳನ್ನು ನಿಯಂತ್ರಿಸಿಕೊಳ್ಳಬೇಕು. ನಮ್ಮ ಬದುಕಿನ ತೇರನ್ನು ನಾವೇ ಎಳೆಯಬೇಕಾಗಿದೆ. ಆತ್ಮಶಕ್ತಿಯೊಂದಿಗೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ದಾನದಿಂದ ಸಂಪತ್ತಿನ ಮೌಲ್ಯ ವರ್ಧನೆಯಾಗುತ್ತದೆ. ಅಧ್ಯಾತ್ಮಿಕತೆ ದೇಶದ ಅಂತಃಸತ್ವವಾಗಿದ್ದು, ಧರ್ಮ ತಿರುಳಾಗಿದೆ. ದೇವಾತ್ಮಕ್ಕೆ ಪಾಪ-ಪುಣ್ಯಗಳ ಲೇಪವಿಲ್ಲ. ಹಾಗಾಗಿ […]
Read More
Date : Sunday, 10-03-2024
“ಒಳಿತು ಮಾಡುವ ಕೆಲಸ ಎಲ್ಲರಿಂದ ಆಗಬೇಕಿದೆ” ‘ಸಿರಿರಾಮೆ’ ತುಳು ಸಾಹಿತ್ಯ ಸಮ್ಮೇಳನದ ಮುಗಿತಲದ ಲೇಸ್ – ‘ತುಳುಸಿರಿ’ ಪ್ರಶಸ್ತಿ ಪ್ರದಾನ ಮಾಡಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ “ಸಾಧಕನಿಗೆ ವಿರೋಧಿಗಳಿಲ್ಲ. ಒಳಿತು ಮಾಡುವ ಕೆಲಸ ಎಲ್ಲರಿಂದ ಆಗಬೇಕಿದೆ. ನಮ್ಮ ಬಗ್ಗೆ ಮಾತನಾಡುವವರಿದ್ದರೆ ಮಾತ್ರ ನಾವು ಎಚ್ಚರದಿಂದ ಇರಲು ಸಾಧ್ಯ. ಸಿರಿರಾಮೆ ಸಮ್ಮೇಳನದ ಉದ್ದೇಶವೇ ಸಮಾಜದ ಉನ್ನತಿಗೆ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ” ಎಂದು ಪೂಜ್ಯ ಶ್ರೀಗಳವರು ಆಶೀರ್ವಚನ ನೀಡಿದರು. ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನ ಬಹಳ ಸುಂದರವಾಗಿ ಕೊನೆಗೊಂಡಿದೆ. […]
Read More
Date : Sunday, 10-03-2024
“ಆನಂದದ ಸೆಲೆ ರಾಮನ ಆದರ್ಶದಲ್ಲಿದೆ” ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಇರುವತ್ತನಾಲ್ನೇ ‘ಸಿರಿರಾಮೆ’ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಸಂದೇಶ ಫೆ.18: “ಮಧ್ವ ನವಮಿಯ ಶುಭಸಂದರ್ಭದಲ್ಲಿ ನಾವಿಲ್ಲಿ ಸೇರಿದ್ದೇವೆ. ಆನಂದದ ಸೆಲೆ ರಾಮನ ಆದರ್ಶದಲ್ಲಿದೆ. ರಾಮನ ಬದುಕೆ ಆನಂದ. ಆತ್ಮಾರಾಮನ ಬಗೆಗಿನ ತಿಳುವಳಿಕೆ ಅಗತ್ಯ. ವಿಶ್ವವೇ ರಾಮಮಯವಾಗಿರುವ ಹಿನ್ನೆಲೆಯಲ್ಲಿ ‘ಸಿರಿರಾಮೆ’ ಎಂಬ ನಾಮಧೇಯದಲ್ಲಿ ಈ ಭಾರಿಯ ತುಳು ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ. ಅಶ್ವತ್ಥ ವೃಕ್ಷವನ್ನು ಸನಾತನ ಹಿಂದೂ ಧರ್ಮಕ್ಕೆ ಹೋಲಿಸಲಾಗಿದೆ. ಎರಡೂ ವಿಚಾರಗಳೂ ನಾಶವಿಲ್ಲದ್ದು. […]
Read More
Date : Sunday, 10-03-2024
“ಆಧ್ಯಾತ್ಮಿಕತೆ-ಆರ್ಥಿಕತೆ ಒಂದಾದಾಗ ಬದುಕು ಸುಂದರ” ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಒಡಿಯೂರು ಶಾಖೆ ಹಾಗೂ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ನೂತನ ಕಛೇರಿಯನ್ನು ಉದ್ಘಾಟಿಸಿ ಪೂಜ್ಯ ಸ್ವಾಮೀಜಿಯವರಿಂದ ಆಶೀರ್ವಚನ ಜ.21: “ಬದುಕಿನಲ್ಲಿ ಸಂಸ್ಕಾರ ಅತೀ ಅಗತ್ಯ. ಬಾಲ್ಯದಲ್ಲಿ ಸಂಸ್ಕಾರ ಸಿಕ್ಕಿದಾಗ ಬದುಕು ಹಸನಾಗುತ್ತದೆ. ನೆನಪಿನಲ್ಲಿ ಉಳಿಯುವ ದಿನ ಇದಾಗಿದೆ. ಸಹಕಾರಿ ಹಾಗೂ ಗ್ರಾಮ ವಿಕಾಸ ಯೋಜನೆ ಎರಡು ಕಣ್ಣುಗಳಿದ್ದಂತೆ. ಅವೆರಡರ ದೃಷ್ಟಿಯೂ ಒಂದೇ. ಅರ್ಪಣಾಭಾವದ ಸೇವೆ ನಮ್ಮದಾಗಬೇಕು. ಆಧ್ಯಾತ್ಮಿಕತೆ ಹಾಗೂ ಆರ್ಥಿಕತೆ ಒಂದಾದಾಗ […]
Read More
Date : Thursday, 07-03-2024
“ಸರಿಯಾದ ವ್ಯಕ್ತಿಯಿಂದ ಇಂದು ಎಲ್ಲರೂನೆನಪಿಟ್ಟುಕೊಳ್ಳುವ ಕೆಲಸವಾಗಿದೆ” ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಪ್ರಯುಕ್ತ ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀರಾಮನಾಮ ತಾರಕಯಜ್ಞ ಭಗವನ್ನಾಮ ಸಂಕೀರ್ತನೆ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ ಜ.22: “ರಾಮನ ಹೆಸರಿನಲ್ಲಿ ನಿಜಾರ್ಥದಲ್ಲಿ ಆಧ್ಯಾತ್ಮಿಕತೆಯ ಬೆಳಕನ್ನು ನೋಡಲು ಸಾಧ್ಯವಾಗುತ್ತದೆ. ತ್ಯಾಗದ ಬದುಕೇ ನಿಜ ಬದುಕು. ಶ್ರೀರಾಮನಾಮಕ್ಕೆ ಇಹವನ್ನು ಪರಕ್ಕೆ ಸೇರಿಸುವ ಶಕ್ತಿಯಿದೆ. ರಾಮಾಯಣದಲ್ಲಿ ಬರುವ ವಿಶೇಷ ಸನ್ನಿವೇಶಗಳನ್ನು ನೆನಪಿಸುವ ಕೆಲಸವಾಗಬೇಕಿದೆ. ರಾಮದೇವರ ಬಿಂಬಕ್ಕೆ ಬಹಳ ಕಲೆ ಇದೆ. ಮಂದಹಾಸದ ನಗು ಶ್ರೀರಾಮನ ಮೂರ್ತಿಯಲ್ಲಿದೆ. ಸರಿಯಾದ ವ್ಯಕ್ತಿಯಿಂದ ಇಂದು ಎಲ್ಲರೂ […]
Read More
Date : Thursday, 07-03-2024
“ಧರ್ಮಾನುಷ್ಠಾನದಿಂದ ಧರ್ಮದ ರಕ್ಷಣೆ” ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಮಾಪ್ತಿಯ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ದ.26: “ದತ್ತ ಅವತಾರವೇ ವಿಶೇಷವಾದುದು. ಇದು ಜ್ಞಾನದ ಅವತಾರವಾಗಿರುತ್ತದೆ. ದತ್ತನನ್ನು ನಂಬಿದವರಿಗೆ ಎಲ್ಲವನ್ನು ನೀಡುವನು. ಜ್ಞಾನದ ಕೊರತೆಯಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಧರ್ಮ-ಸಂಸ್ಕೃತಿ ಜೊತೆಯಾಗಿ ಸಾಗಿದಾಗ ಬದುಕು ಹಸನಾಗುವುದು. ಧರ್ಮ ಸಂರಕ್ಷಣೆಯಾಗದಿದ್ದರೆ ಅಪಾಯವಿದೆ. ಧರ್ಮಾನುಷ್ಠಾನವಾದಾಗಲೇ ಧರ್ಮದ ರಕ್ಷಣೆಯಾಗುವುದು. ಧರ್ಮ ಅತೀ ಶ್ರೇಷ್ಠವಾದುದು. ಧರ್ಮಯುಕ್ತ ಸಮಾಜದಿಂದ ಅಪತ್ತು ಕಡಿಮೆ. ದೀಪ ನಂದಿಸುವುದು ನಮ್ಮ ಸಂಪ್ರದಾಯವಲ್ಲ. ದೀಪ ಹಚ್ಚುವುದು […]
Read More
Date : Thursday, 07-03-2024
“ಹೃದಯವನ್ನು ಗೆಲ್ಲುವ ಜತೆಗೆ ಬದುಕನ್ನು ಸರಿಪಡಿಸುವ ಕಾರ್ಯ ಶ್ರೀಮದ್ಭಾಗವತದಿಂದ ಸಾಧ್ಯ” ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತಮಹಾಯಾಗ ಸಪ್ತಾಹಕ್ಕೆ ಚಾಲನೆ ನೀಡಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ದ.20: “ರಾಗ ದ್ವೇಷವನ್ನು ದೂರ ಮಾಡಿ ಪ್ರೀತಿ ಭಾವವನ್ನು ತುಂಬಿಕೊಳ್ಳುವ ಕಾರ್ಯವಾಗಬೇಕು. ಹೃದಯವನ್ನು ಗೆಲ್ಲುವ ಜತೆಗೆ ಬದುಕನ್ನು ಸರಿಪಡಿಸುವ ಕಾರ್ಯವನ್ನು ಶ್ರೀಮದ್ಭಾಗವತ ಮಾಡುತ್ತದೆ. ಗೊಂದಲಗಳಿಗೆ ಪರಿಹಾರ ನೀಡುವ, ಬದುಕಿನ ಕತ್ತಲನ್ನು ದೂರ ಮಾಡುವ ಕಾರ್ಯ ಗುರುತತ್ವದ ಅನುಷ್ಠಾನದಿಂದ ಸಾಧ್ಯ. ಮನಸ್ಸಿಗೆ ಸದ್ವಿಚಾರಗಳನ್ನು ನೀಡಿದಾಗ ಉತ್ತಮ ಹಾದಿಯಲ್ಲಿ ನಡೆಯಲು ಸಾಧ್ಯ” ಎಂದು […]
Read More