+91 8255-266211
info@shreeodiyoor.org

ಸರಿಯಾದ ವ್ಯಕ್ತಿಯಿಂದ ಇಂದು ಎಲ್ಲರೂನೆನಪಿಟ್ಟುಕೊಳ್ಳುವ ಕೆಲಸವಾಗಿದೆ

“ಸರಿಯಾದ ವ್ಯಕ್ತಿಯಿಂದ ಇಂದು ಎಲ್ಲರೂನೆನಪಿಟ್ಟುಕೊಳ್ಳುವ ಕೆಲಸವಾಗಿದೆ”
ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಪ್ರಯುಕ್ತ ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀರಾಮನಾಮ ತಾರಕಯಜ್ಞ ಭಗವನ್ನಾಮ ಸಂಕೀರ್ತನೆ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ
ಜ.22: “ರಾಮನ ಹೆಸರಿನಲ್ಲಿ ನಿಜಾರ್ಥದಲ್ಲಿ ಆಧ್ಯಾತ್ಮಿಕತೆಯ ಬೆಳಕನ್ನು ನೋಡಲು ಸಾಧ್ಯವಾಗುತ್ತದೆ. ತ್ಯಾಗದ ಬದುಕೇ ನಿಜ ಬದುಕು. ಶ್ರೀರಾಮನಾಮಕ್ಕೆ ಇಹವನ್ನು ಪರಕ್ಕೆ ಸೇರಿಸುವ ಶಕ್ತಿಯಿದೆ. ರಾಮಾಯಣದಲ್ಲಿ ಬರುವ ವಿಶೇಷ ಸನ್ನಿವೇಶಗಳನ್ನು ನೆನಪಿಸುವ ಕೆಲಸವಾಗಬೇಕಿದೆ. ರಾಮದೇವರ ಬಿಂಬಕ್ಕೆ ಬಹಳ ಕಲೆ ಇದೆ. ಮಂದಹಾಸದ ನಗು ಶ್ರೀರಾಮನ ಮೂರ್ತಿಯಲ್ಲಿದೆ. ಸರಿಯಾದ ವ್ಯಕ್ತಿಯಿಂದ ಇಂದು ಎಲ್ಲರೂ ನೆನಪಿಟ್ಟುಕೊಳ್ಳುವ ಕೆಲಸವಾಗಿದೆ. ರಾಮತಾರಕಕ್ಕೆ ಅಪಾರ ಶಕ್ತಿ ಇದೆ. ಸರಿಯಾದ ಅರ್ಥ ಬರುವ ಹೆಸರುಗಳನ್ನು ಮಕ್ಕಳಿಗೆ ಇಡುವ ಕೆಲಸವಾಗಬೇಕು. ಮಕ್ಕಳಲ್ಲಿ ಸಂಸ್ಕøತಿಯ ಬೀಜ ಬಿತ್ತುವ ಕೆಲಸ ನಡೆಯಬೇಕು. ಪಂಚತತ್ತ್ವಗಳು ಕೆಲಸಮಾಡದಿದ್ದರೆ ಆರೋಗ್ಯದಲ್ಲಿ ಏರುಪೇರಾಗಬಹುದು. ಆಹಾರ ಪದ್ದತಿಯಲ್ಲಿ ಸರಿಯಾದ ನಿಯಮಗಳಿರಬೇಕು. ನಮ್ಮ ಕರ್ತವ್ಯವನ್ನು ನೆನಪಿಸುವ ಕೆಲಸ ಅಯೋಧ್ಯೆಯಲ್ಲಿ ಇಂದು ನಡೆದ ಕಾರ್ಯದಿಂದ ಆಗಿದೆ. ನಮ್ಮ ಕರ್ತವ್ಯವನ್ನು ನಿಭಾಯಿಸಿಕೊಂಡು ಮುನ್ನಡೆದರೆ ಯಶಸ್ಸು ಹೆಚ್ಚು. ರಾಮ ಎಂದರೆ ಅದ್ಭುತ ಶಬ್ದ. ನಡೆ ನುಡಿ ಒಂದಾದರೆ ಧರ್ಮ ನಿರ್ಮಾಣವಾಗುವುದು. ಭಾರತೀಯ ಪರಂಪರೆಯನ್ನು ತಿಳಿಯಲು ರಾಮಾಯಣ, ಮಹಾಭಾರತ ಓದಬೇಕು. ರಾಷ್ಟ್ರೀಯ ಆದರ್ಶಗಳು ರಾಮಾಯಣದಲ್ಲಿ ಅಡಗಿದೆ. ರಾಗ ದ್ವೇಷಗಳು ದೂರವಾಗಿ ಪ್ರೇಮಭಾವ ನಮ್ಮೊಳಗೆ ತುಂಬಬೇಕು” ಎಂದರು.
ಸಾದ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಮುಂಬೈಯ ಉದ್ಯಮಿ ಶ್ರೀ ವಾಮಯ್ಯ ಶೆಟ್ಟಿ ಚೆಂಬೂರು, ಒಡಿಯೂರು ಶ್ರೀ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಗಾಯಕ ರವಿರಾಜ್ ಶೆಟ್ಟಿ ಒಡಿಯೂರು, ಉದ್ಯಮಿ ಶ್ರೀ ಭರತ್‍ಭೂಷಣ್ ಮಂಗಳೂರು, ಕರಸೇವಕರಾದ ಶ್ರೀ ಅಜಿತ್‍ನಾಥ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸದ್ಗುರು ಬಳಗ ಹೊಸಂಗಡಿ, ನಾದಸಂಕೀರ್ತನ ಬಳಗ ಮಂಗಳೂರು, ಗಾನಸುರಭಿ ಉಜಿರೆ ಇವರಿಂದ ಭಗವನ್ನಾಮ ಸಂಕೀರ್ತನೆ ನಡೆಯಿತು. ಡಾ.ಗುರುದಾಸ್ ಎಸ್.ಪಿ. ಇವರಿಂದ ‘ಶ್ರೀರಾಮ-ಗುಣಧಾಮ’ ಕಥಾ ಸಂಕೀರ್ತನೆ ನಡೆಯಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top