+91 8255-266211
info@shreeodiyoor.org

ಸೇವಾರ್ಥಿಗಳಿಗೊಂದು ಸದಾವಕಾಶ

ಸಮಾಜದ ಸಂಪೂರ್ಣ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಶ್ರೀ ಗುರುದೇವ ಪಬ್ಲಿಕ್ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಕೆಲವೊಂದು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸಮಸ್ತ ಹಿತದ ಹಂಬಲವುಳ್ಳ ಸಮರ್ಥ ಸೇವಾರ್ಥಿಗಳಿಗೆ ಈ ಯೋಜನೆಗಳಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಸೇವಾ ರೂಪದಲ್ಲಿ ನೀಡಬಯಸುವ ಸಹಾಯಧನವನ್ನು ಕೃತಜ್ಞತಾಪೂರ್ವಕ ಸ್ವೀಕರಿಸಲಾಗುವುದು. ಈ ಸಹಾಯಧನಕ್ಕೆ ಸರಕಾರದ ಆದಾಯ ತೆರಿಗೆ ವಿನಾಯಿತಿ (80-ಜಿ) ಇದೆ.

* ಅಕ್ಷರನಿಧಿ ಯೋಜನೆ : ಆರ್ಥಿಕವಾಗಿ ದುರ್ಬಲರಾಗಿದ್ದು, ಶಿಕ್ಷಣದಲ್ಲಿ ಆಸಕ್ತಿ ಇರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಕಾರ.

* ಅಕ್ಷಯನಿಧಿ (ನಾರಾಯಣ ಸೇವೆ) : ಶ್ರೀ ಸಂಸ್ಥಾನಕ್ಕೆ ಭೇಟಿ ನೀಡುವ ಭಕ್ತ ಜನತೆಗೆ ಮಧ್ಯಾಹ್ನ ಹಾಗೂ ರಾತ್ರಿಯ ಭೋಜನ ಪ್ರಸಾದ; ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಭೋಜನದ ವ್ಯವಸ್ಥೆ.

* ಆರೋಗ್ಯಧಾಮ ಯೋಜನೆ : ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಪುನರುಜ್ಜೀವನ, ಶ್ರೀ ಸಂಸ್ಥಾನದ ನೈರುತ್ಯ ಭಾಗದಲ್ಲಿರುವ ‘ಹನುಮಗಿರಿ’ಯಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು.

* ನವ ನಿಕೇತನ : ಆರ್ಥಿಕವಾಗಿ ಹಿಂದುಳಿದ, ಗೃಹ ನಿರ್ಮಾಣದ ಅಗತ್ಯವಿರುವವರಿಗೆ ಸಮುದಾಯ ಮನೆಗಳನ್ನು ನಿರ್ಮಿಸುವುದು, ಹಳೆ ಮನೆಗಳ ದುರಸ್ತಿಗೆ ಆರ್ಥಿಕ ಅಥವಾ ವಸ್ತು ರೂಪದ ಸಹಾಯ.

* ಗೋ ಸೇವಾ ಯೋಜನೆ : ಗೋ ಸಂರಕ್ಷಣೆ-ಸಮೃದ್ಧಿ. ಸಂಸ್ಕಾರ-ಸಹಕಾರ-ಸಂಘಟನೆ-ಸಮೃದ್ಧಿ ಎನ್ನುವ ಧ್ಯೇಯವನ್ನು ಅಳವಡಿಸಿಕೊಂಡು ಗ್ರಾಮೀಣ ಅಭಿವೃದ್ಧಿಯ ಪಥದಲ್ಲಿ ಈ ಮೇಲಿನ ಯೋಜನೆಗಳನ್ನು ಸೇವಾರ್ಥಿಗಳ ಸಹಾಯ-ಸಹಕಾರದೊಂದಿಗೆ ಹಂತಹಂತವಾಗಿ ಸಂಯೋಜಿಸಲಾಗುವುದು.

ಯೋಜನೆಗಳ ಸಾಕಾರಕ್ಕೆ ನಗದಾಗಿ ಸಹಕರಿಸುವವರು ಸೇವಾವಿಭಾಗದಲ್ಲಿ ಸಂದಾಯ ಮಾಡಬಹುದು.
 

ಬ್ಯಾಂಕ್ ಖಾತೆ ಸಂಖ್ಯೆ – 01662200028216 (ಐ ಫ್ ಸ್ ಸಿ ನಂಬರ್ : SYNB-40166 )– ಸಿಂಡಿಕೇಟ್ ಬ್ಯಾಂಕ್) 
ಅಥವಾ
ಬ್ಯಾಂಕ್ ಖಾತೆ ಸಂಖ್ಯೆ – 200201010005858 ( ಐ ಫ್ ಸ್ ಸಿ ನಂಬರ್ : VIJB-0002002) ವಿಜಯ ಬ್ಯಾಂಕ್, ಬಾಯಾರು ಶಾಖೆಗೆ ಸಂದಾಯ ಮಾಡಬಹುದು.
 
Help Us to Help Others. Together, yes WE can!
 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top