ಅಂತರಾಷ್ಟ್ರೀಯ ಯೋಗ ದಿನಾಚರಣೆ
Date : Thursday, 22-06-2017
ಆನಂದವನ್ನು ಅನುಭವಿಸಲು
Date : Monday, 10-04-2017
ಶ್ರೀರಾಮ ನವಮಿಯಿಂದ ಅಖಂಡ ಭಗವನ್ನಾಮ ಸಂಕೀರ್ತನೆ ಆರಂಭಗೊಂಡು ಶ್ರೀ ಸಂಸ್ಥಾನದ ಆರಾಧ್ಯಮೂರ್ತಿ ಹನುಮ ಜಯಂತಿಯಂದು ಸಮಾಪನಗೊಳ್ಳುವುದು. ಶ್ರೀಮದ್ರಾಮಾಯಣ ಯಜ್ಞ, ಧಾರ್ಮಿಕ ಗೋಷ್ಠಿ, ವಿಶೇಷ ವೈದಿಕ ಕಾರ್ಯಕ್ರಮಗಳೊಂದಿಗೆ ಹನುಮ ಜಯಂತಿ ಸಂಪನ್ನಗೊಳ್ಳುವುದು. ” order_by=”sortorder” order_direction=”ASC” returns=”included” maximum_entity_count=”500″]
Date : Monday, 10-04-2017
ಶ್ರೀ ಸಂಸ್ಥಾನದ ಪ್ರತಿಷ್ಠಾ ಮುಹೂರ್ತವನ್ನು ಪ್ರತಿವರ್ಷ ವಾರ್ಷಿಕೋತ್ಸವಾಗಿ ಆಚರಿಸಲಾಗುತ್ತಿದ್ದು, 2001ರಿಂದ ಒಡಿಯೂರು ರಥೋತ್ಸವವಾಗಿದೆ. ಒಡಿಯೂರು ರಥೋತ್ಸವ 2014 ರಿಂದ ತುಳುನಾಡ ಜಾತ್ರೆಯಾಗಿ ಸಂಭ್ರಮದ ಪರ್ವ ವಾಗಿದೆ. ಇದೊಂದು ಕಣ್ಣಿಗೆ ಹಬ್ಬವಾಗಿ ಈ ನಾಡಿನ ಅಪೂರ್ವ ಉತ್ಸವವಾಗಿ ದಾಖಲಾಗಿದೆ. ಸುಮಾರು 12 ಕಿ.ಮೀ. ಕ್ರಮಿಸುವ ಶ್ರೀ ದತ್ತಗುರು, ಪ್ರಾಣದೇವರ ಒಡಿಯೂರು ರಥೋತ್ಸವ ಜನಮನವನ್ನು ಆಕರ್ಷಿಸುವ ಹಬ್ಬವಾಗಿದೆ. ನವರತ್ನಖಚಿತವಾದ ಶ್ರೀ ದತ್ತಗುರು ಸ್ವರ್ಣಪಾದುಕೆಗಳನ್ನು ಮತ್ತು ಅಭಯ ಹಸ್ತದ ಭವ್ಯವಾದ ಪ್ರಾಣದೇವರ ಉತ್ಸವಮೂರ್ತಿಯನ್ನು ವೇದಘೋಷ, ಪಂಚ ವಾದ್ಯಗಳ ನಿನಾದದೊಂದಿಗೆ ರಥದಲ್ಲಿ ರಿಸಲಾಗುತ್ತದೆ. […]
Date : Wednesday, 05-04-2017
ಹನುಮ ಜಯಂತಿ: ಶ್ರೀರಾಮ ನವಮಿಯಿಂದ ಅಖಂಡ ಭಗವನ್ನಾಮ ಸಂಕೀರ್ತನೆ ಆರಂಭಗೊಂಡು ಶ್ರೀ ಸಂಸ್ಥಾನದ ಆರಾಧ್ಯಮೂರ್ತಿ ಹನುಮ ಜಯಂತಿಯಂದು ಸಮಾಪನಗೊಳ್ಳುವುದು. ಶ್ರೀಮದ್ರಾಮಾಯಣ ಯಜ್ಞ, ಧಾರ್ಮಿಕ ಗೋಷ್ಠಿ, ವಿಶೇಷ ವೈದಿಕ ಕಾರ್ಯಕ್ರಮಗಳೊಂದಿಗೆ ಹನುಮ ಜಯಂತಿ ಸಂಪನ್ನಗೊಳ್ಳುವುದು. ನಾಗರಪಂಚಮಿ : ಶ್ರೀ ಸುಬ್ರಹ್ಮಣ್ಯ ದೇವರ ವಿಶೇಷ ಸಾನಿಧ್ಯವಿರುವ ಶ್ರೀ ಸಂಸ್ಥಾನದಲ್ಲಿ ನಾಗರಪಂಚಮಿಯಂದು ಸಾರ್ವಜನಿಕ ಆಶ್ಲೇಷ ಬಲಿ ಪೂಜೆ ಜರಗುವುದು. ನಾಗದೋಷ ಪರಿಹಾರಕ್ಕೆ ಸಂಬಂಧಿಸಿದ ಸೇವೆ ಆರಾಧನೆಗಳು ಈ ಸಂದರ್ಭದಲ್ಲಿ ಶ್ರೀ ಸುಬ್ರಾಯ ದೇವರಿಗೆ ಸಲ್ಲಿಸುವುದು ವಿಶೇಷವಾಗಿದೆ. ಲಲಿತಾಪಂಚಮಿ : ನವರಾತ್ರಿಯ ಪರ್ವಕಾಲದಲ್ಲಿ […]
Date : Tuesday, 04-04-2017
ಪೂಜ್ಯ ಸ್ವಾಮೀಜಿಯವರು ಪ್ರತಿ ವರ್ಷ ಎರಡು ಬಾರಿ ತೀರ್ಥ ಕ್ಷೇತ್ರ ಸಂಚಾರವನ್ನು ಶಿಷ್ಯವರ್ಗದವರೊಂದಿಗೆ ಕೈಗೊಳ್ಳುವರು. ಶ್ರೀ ಗುರುದೇವ ಸೇವಾ ಬಳಗದ ಸದಸ್ಯರು ಪೂಜ್ಯಶ್ರೀಗಳೊಂದಿಗೆ ತೀರ್ಥಾಟನೆಗೆ ಹೋಗುತ್ತಾರೆ. ಸಾಧು-ಸಂತರ, ಋಷಿಮುನಿಗಳ, ಯತಿವರ್ಯರ ಪುಣ್ಯ ಪಾದಸ್ಪರ್ಶದಿಂದ ತೀರ್ಥಗಳು ಪುನೀತವಾಗುತ್ತವೆಯಂತೆ. ಪೂಜ್ಯಶ್ರೀಗಳು ಹೇಳುವಂತೆ ‘ಲೋಕಸಂಚಾರ, ತೀರ್ಥಕ್ಷೇತ್ರ ಸಂಚಾರದಿಂದ ಅನುಭವ ಪಕ್ವವಾಗುತ್ತದೆ. ಸ್ವಾನುಭವದಿಂದ ಗಳಿಸಿದ ಜ್ಞಾನವೇ ಸುಜ್ಞಾನ’.
‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’