ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕನ್ಯಾನ ಘಟಸಮಿತಿಯ ನೂತನ ಸಂಘ ಒಡಿಯೂರು ಶ್ರೀ ಗೋಪಾಲಕೃಷ್ಣ ವಿಕಾಸವಾಹಿನಿ ಸ್ವ-ಸಹಾಯ ಸಂಘವನ್ನು ಮರಾಠಿಮೂಲೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ಅಧ್ಯಕ್ಷರಾಗಿ ಶ್ರೀ ಈಶ್ವರ ಗೌಡ, ಕಾರ್ಯದರ್ಶಿಯಾಗಿ ಶ್ರೀ ಯಶವಂತ ಗೌಡ ಇವರನ್ನು ಆಯ್ಕೆ ಮಾಡಲಾಯಿತು. ಕನ್ಯಾನ ಗ್ರಾಮದ ಸೇವಾದೀಕ್ಷಿತರಾದ ಶ್ರೀ ರಾಧಾಕೃಷ್ಣ.ಕೆ ಇವರು ಸ್ವಾಗತಿಸಿ ಯೋಜನೆಯ ಮಾಹಿತಿ ನೀಡಿ ಧನ್ಯವಾದವಿತ್ತರು.