ಸರಕಾರೀ ಉದ್ಯೋಗದಲ್ಲಿದ್ದು ನಿವೃತ್ತರಾದ ಶ್ರೀಯುತ ರಘುನಾಥ ರೈಯವರು ಶ್ರೀ ಸಂಸ್ಥಾನದ ಆಗು-ಹೋಗುಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸೇವಾಕಾರ್ಯಗಳಿಗೆ ಮಾದರಿಯಾಗಿದ್ದರು. ಸರಳ-ಸಜ್ಜನಿಕೆಯ, ಪ್ರಾಮಾಣಿಕ ವ್ಯಕ್ತಿತ್ವದ ರೈಗಳ ಅಗಲುವಿಕೆಗೆ ವಿಷಾಧಿಸುತ್ತೇವೆ. ಅಗಲಿದ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಮತ್ತು ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಶ್ರೀ ಸಂಸ್ಥಾನವು ಪ್ರಾರ್ಥಿಸುತ್ತದೆ.