ಕರ್ನಾಟಕ ಸಂಗೀತವನ್ನು ಉಸಿರಿನಲ್ಲಿ ನುಡಿಸುವ ಮೂಲಕ ಸ್ಯಾಕ್ಸೋಫೋನ್ ನಾದವನ್ನು ವಿಶ್ವಕ್ಕೆ ಪಸರಿಸಿ ವಿಶ್ವವಿಖ್ಯಾತರಾದ, ತುಳುನಾಡಿನ ಅಸಾಧಾರಣ ಪ್ರತಿಭೆ ಸ್ಯಾಕ್ಸೋಫೋನ್ ಮಾಂತ್ರಿಕ ಕಲೈಮಾಮಣಿ ಪದ್ಮಶ್ರೀ ಕದ್ರಿ ಗೋಪಾಲ್ನಾಥ್ ಇವರು ಕಣ್ಮರೆಯಾದುದು ಸಂಗೀತ ಲೋಕಕ್ಕೆ ಅಪಾರ ನಷ್ಟ. ಒಡಿಯೂರು ಶ್ರೀ ಸಂಸ್ಥಾನದ ಮುಖ್ಯ ಅಭಿಮಾನಿಗಳಾದ ಅವರಿಗೆ ಆರಾಧ್ಯಮೂರ್ತಿ ಶ್ರೀ ದತ್ತಾಂಜನೇಯ ದೇವರು ಸಾಯುಜ್ಯವನ್ನು ಕರುಣಿಸಲಿ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇವೆ.