ಕೇರಳದಲ್ಲಿ ಇತ್ತೀಚೆಗೆ ಸಂಭವಿಸಿದ ನೆರೆಯಿಂದಾದ ತೊಂದರೆಗಳಿಗೆ ಪರಿಹಾರಾರ್ಥವಾಗಿ ರೂಪಾಯಿ ಒಂದು ಲಕ್ಷದ ಚೆಕ್ಕನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯು ಸಮರ್ಪಿಸಿದ, ಶ್ರೀ ಗುರುದೇವ ಪಬ್ಲಿಕ್ ಚ್ಯಾರಿಟೇಬಲ್ ಟ್ರಸ್ಟ್(ರಿ.)ನ ಮೂಲಕ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ತಿರುವನಂತಪುರ ಘಟಕದ ಅಧ್ಯಕ್ಷರು, ಚೆಂಗನ್ನೂರು ಪ್ರಾದೇಶಿಕ ಸಾರಿಗೆ ಸಹಾಯಕ ಅಧಿಕಾರಿ ಶ್ರೀ ಅಜಿತ್ಕುಮಾರ್ ಪಂದಳಮ್ ಇವರು ಕೇರಳ ಸರಕಾರದ ಹಣಕಾಸು ಸಚಿವ ಶ್ರೀ ತೋಮಸ್ ಇಸಾಖ್ ಇವರಿಗೆ ಹಸ್ತಾಂತರಿಸಿದರು. ಶಾಸಕ ಶ್ರೀ ಸಾಜಿ ಚೆರಿಯನ್ ಉಪಸ್ಥಿತರಿದ್ದರು.