“ಬದುಕಿನಲ್ಲಿಯೂ ಆಗಮನ ನಿರ್ಗಮನವಿದೆ.ಆತ್ಮವಿಶ್ವಾಸವನ್ನು ತುಂಬಿಕೊಂಡಾಗ ಭವಿಷ್ಯವನ್ನು ಪರಿಪೂರ್ಣಗೊಳಿಸಬಹುದು.ಆಸಕ್ತಿಗಳು ಭವಿಷ್ಯದ ಬೆಳವಣಿಗೆಗೆ ಪೂರಕ. ಉತ್ತಮ ಸಂಸ್ಕಾರಗಳು ವಿದ್ಯೆಯೊಂದಿಗೆ ಸೇರಿದಾಗ ಉಜ್ವಲ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.ಕೌಶಲ್ಯದೊಂದಿಗೆ ಪರಿಶ್ರಮವಿದ್ದಾಗ ಉತ್ತಮ ಫಲಿತಾಂಶ ನಮ್ಮದಾಗುತ್ತದೆ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ನ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಕನ್ಯಾನ ಶ್ರೀ ಗುರುದೇವ ಕಲ್ಯಾಣಮಂಟಪದಲ್ಲಿ ಜರಗಿದ ಸಮಾರಂಭದಲ್ಲಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು.
ಶ್ರೀ ಟಿ. ತಾರಾನಾಥ ಕೊಟ್ಟಾರಿ, ಶ್ರೀ ಎಚ್.ಕೆ. ಪುರುಷೋತ್ತಮ, ಶ್ರೀ ದಾಮೋದರ ಶೆಟ್ಟಿ ನವಿಮುಂಬೈ, ಶ್ರೀ ಪ್ರಕಾಶ್ ವಿ. ಶೆಟ್ಟಿ, ನವಿಮುಂಬೈ, ಶ್ರೀ ಜಯಂತ್ ಜೆ. ಕೋಟ್ಯಾನ್, ಶ್ರೀ ಬಿ.ಕೆ. ಚಂದ್ರಶೇಖರ್, ಶ್ರೀ ಕೆ.ಪಿ. ರಘುರಾಮ ಶೆಟ್ಟಿ ಕನ್ಯಾನ, ಶ್ರೀ ಪಿ. ಲಿಂಗಪ್ಪ ಗೌಡ, ಶ್ರೀ ವಾಸುದೇವ ಆರ್.ಕೊಟ್ಟಾರಿ, ಶ್ರೀ ಉಗ್ಗಪ್ಪ ಶೆಟ್ಟಿ ಕೊಂಬಿಲ ಉಪಸ್ಥಿತರಿದ್ದು ಶುಭಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲ ಶ್ರೀ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು.ಉಪನ್ಯಾಸಕಿ ಕು|ಶ್ವೇತಾ ಕಾರ್ಯಕ್ರಮನಿರೂಪಿಸಿ, ಶ್ರೀಮತಿ ಪ್ರಮೀಳಾ ಪ್ರಾರ್ಥನೆಗೈದರು. ಉಪನ್ಯಾಸಕ ಶ್ರೀ ರಕ್ಷಿತ್ ಶೆಟ್ಟಿ ವಂದನಾರ್ಪಣೆಗೈದರು.