+91 8255-266211
info@shreeodiyoor.org

ಒಳಾಂಗಣ ಸ್ಪರ್ಧೆ


ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವದಂಗವಾಗಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ನಡೆದ ಒಳಾಂಗಣ ಸ್ಪರ್ಧೆಗಳನ್ನು ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ದೀಪೋಜ್ವಲನದ ಮೂಲಕ ಉದ್ಘಾಟಿಸಿದರು. ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಹಿಳೆಯರಿಗೆ ಸಂಗೀತ ಕುರ್ಚಿ, ದೃಷ್ಟಿ ಯುದ್ಧ, ಭಕ್ತಿ ಗೀತೆ, ಹಣತೆ ಉರಿಸುವುದು, ರಂಗೋಲಿ ಸ್ಪರ್ಧೆ (ಬೇಕಾದ ಪರಿಕರ ಸ್ಪರ್ಧಿಗಳೇ ತರುವುದು). ಬಾಲಕಿಯರಿಗೆ ಸಂಗೀತ ಕುರ್ಚಿ, ರಂಗೋಲಿ ಸ್ಪರ್ಧೆ, ಭಕ್ತಿಗೀತೆ(6 ರಿಂದ 10ನೇ ತರಗತಿ ಮಕ್ಕಳಿಗೆ). ಬಾಲಕರಿಗೆ ಭಕ್ತಿಗೀತೆ, ಪೆನ್ಸಿಲ್ ಡ್ರಾಯಿಂಗ್ (6 ರಿಂದ 10ನೇ ತರಗತಿ ಮಕ್ಕಳಿಗೆ). ಪುರುಷರಿಗೆ ಚಕ್ರಾಸನ, ದೃಷ್ಟಿಯುದ್ಧ, ಭಕ್ತಿಗೀತೆ, ಹಲ್ಲಿನಿಂದ ತೆಂಗಿನಕಾಯಿ ಸುಲಿಯುವುದು, ಹಣತೆ ಉರಿಸುವ ಸ್ಪರ್ಧೆ ನಡೆಯಿತು.

ಮುಕ್ತಸ್ಪರ್ಧೆಗಳು: (10ನೇ ತರಗತಿಯಿಂದ ಮೇಲ್ಪಟ್ಟವರಿಗೆ) ಆಶುಭಾಷಣ, ಆಶು ನಟನೆ, ಛದ್ಮವೇಷ, ಭಗವದ್ಗೀತೆ ಕಂಠಪಾಠ (8ನೇ ಅಧ್ಯಾಯದ 1,2,3,4,5,6,7,8ನೇ ಶ್ಲೋಕ). (6 ರಿಂದ 10ನೇ ತರಗತಿ ಮಕ್ಕಳಿಗೆ) ಭಗವದ್ಗೀತೆ ಕಂಠಪಾಠ(7ನೇ ಅಧ್ಯಾಯದ 1,2,3,4,5,6 ನೇ ಶ್ಲೋಕ), ಆಶುಭಾಷಣ, ಆಶು ನಟನೆ, ಛದ್ಮವೇಷ. ಮುಕ್ತ ಸ್ಪರ್ಧೆ ಭಜನಾ ಅಂತ್ಯಾಕ್ಷರಿ (6 ಜನರ ತಂಡ) ವಿಶೇಷ ಸ್ಪರ್ಧೆ ನಿಧಿ ಶೋಧನೆ ಸಂಪನ್ನಗೊಂಡಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top