+91 8255-266211
info@shreeodiyoor.org

ಆಧ್ಯಾತ್ಮಿಕತೆ ಮತ್ತು ಆಧುನಿಕತೆಯ ಸಮನ್ವಯ

ಪ್ರಾಚೀನ ಭಾರತೀಯ ಸಂಸ್ಕøತಿಯನ್ನು ಕಾಪಿಟ್ಟುಕೊಳ್ಳುವುದರ ಜೊತೆಜೊತೆಗೆ, ಇಂದಿನ ಜಾಗತೀಕರಣದ ಹಾಗೂ ಡಿಜಿಟಲೀಕರಣದ ಯುಗಕ್ಕೆ ಹೊಂದಿಕೊಳ್ಳುವಂತ ವಿಜ್ಞಾನದ ಆಧುನಿಕ ಆವಿಷ್ಕಾರಗಳನ್ನು ಮೈಗೂಡಿಸಿಕೊಂಡು, ದೃಶ್ಯ -ಶ್ರಾವ್ಯ ಎರಡನ್ನು ಒಳಗೊಂಡ ಸೆಟಲೈಟ್ ಬೇಸ್‍ಡ್ ಸ್ಮಾರ್ಟ್ ಕ್ಲಾಸುಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ನಡೆಸಲಾಗುತ್ತಿದೆ. ದೂರದಿಂದ ಬರುವ ವಿದ್ಯಾರ್ಥಿಗಳಿಗಾಗಿ ಶಾಲಾ ವಾಹನದ ವ್ಯವಸ್ಥೆ ಇರುತ್ತದೆ.

ಹಿರಿಯ ಅನುಭವಿ ಶಿಕ್ಷಕರೊಂದಿಗೆ, ಉತ್ಸಾಹಿ ಯುವ ಶಿಕ್ಷಕರನ್ನು ಕೂಡಿಸಿಕೊಂಡು ಹಳೆಬೇರು – ಹೊಸ ಚಿಗುರು ಎಂಬಂತೆ ನಿರೂಪಿಸಲಾಗಿದೆ. ಸ್ಥಳೀಯ ವಿದ್ಯಾರ್ಥಿಗಳೊಂದಿಗೆ, ಗಡಿಯ ಆಚೆಗಿನ ಕೇರಳದ ಗಡಿನಾಡ ವಿದ್ಯಾರ್ಥಿಗಳೂ ಸೇರಿಕೊಂಡಿದ್ದಾರೆ. ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತವನ್ನು ಒಂದು ಭಾಷಾ ಪಾಠವಾಗಿ ಕಲಿಸಲಾಗುತ್ತದೆ. ಭಗವದ್ಗೀತಾ ಪಠಣ, ಭಜನೆ, ಶಾಲಾ ಪ್ರಾರ್ಥನೆ, ನಾಡಗೀತೆ ಹಾಗೂ ರಾಷ್ಟ್ರಗೀತೆಯೊಂದಿಗೆ ಪ್ರತಿನಿತ್ಯದ ತರಗತಿಗಳು ಆರಂಭವಾಗುವುದಲ್ಲದೆ, ಪೂಜ್ಯ ಮಾತಾನಂದಮಯಿ ಇವರಿಂದ ನೀತಿಬೋಧೆ ತರಗತಿಗಳಿದ್ದು, ಅವುಗಳಲ್ಲಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ಪಾಲ್ಗೊಳ್ಳುತ್ತಾರೆ.

ಹೀಗೆ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯೊಂದಿಗೆ ನೈತಿಕ ಶಿಕ್ಷಣ ಹಾಗೂ ಜೀವನ ಶಿಕ್ಷಣವನ್ನು ಒಳಗೊಂಡ ಮೌಲ್ಯಯುತ ಶಿಕ್ಷಣವನ್ನು ನೀಡುವುದರ ಮೂಲಕ ಒಂದು ಸದೃಢ ರಾಷ್ಟ್ರನಿರ್ಮಾಣಕ್ಕೆ ಪೂರಕವಾಗುವ ಸತ್ಪ್ರಜೆಗಳನ್ನು ತಯಾರು ಮಾಡುವ ಕಾಯಕವು ಶ್ರೀ ಗುರುಗಳ ಸಂಕಲ್ಪದಂತೆ ಶ್ರೀ ಗುರುದೇವ ವಿದ್ಯಾಪೀಠದಲ್ಲಿ ನಿರಂತರವಾಗಿ ನಡೆಯುತ್ತಿದೆ.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top