Date : Tuesday, 01-08-2023
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ವನಮಹೋತ್ಸವ ಆಚರಣೆ ಪೂಜ್ಯ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಅಂಗವಾಗಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಾಧ್ವಿ ಶ್ರೀ ಮಾತಾನಂದಮಯೀ, ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್. ರೈ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಆಟದ ಮೈದಾನದ ಸುತ್ತಲೂ ವಿವಿಧ ಹಣ್ಣು, ಹೂಗಳ […]
Read More
Date : Monday, 03-07-2023
ಬುದ್ಧಿಯ ವಿಕಾಸಕ್ಕೆ ಹಾಗೂ ಪ್ರತಿಭೆಗಳ ಅನಾವರಣಕ್ಕೆ ಸ್ಪರ್ಧೆಗಳು ಪೂರಕ ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಗ್ರಾಮೋತ್ಸವ 2023ರ ಅಂಗವಾಗಿ ಒಳಾಂಗಣ (ಸಾಂಸ್ಕೃತಿಕ) ಸ್ಪರ್ಧೆ ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ “ಸ್ಪರ್ಧೆಗಳ ಆಯೋಜನೆಯಿಂದ ಮನುಷ್ಯ ಮನುಷ್ಯನ ನಡುವಿನ ಕೊಂಡಿ, ಸಂಬಂಧ ಬಲಪಡಿಸುವ ಕೆಲಸವಾಗುತ್ತದೆ. ಬುದ್ಧಿಯ ವಿಕಾಸಕ್ಕೆ ಹಾಗೂ ಪ್ರತಿಭೆಗಳ ಅನಾವರಣಕ್ಕೆ ಇಂತಹ ಒಳಾಂಗಣ ಸ್ಪರ್ಧೆಗಳು ಅವಶ್ಯ. ಬುದ್ಧಿಗೆ ಸ್ವಲ್ಪ ಚುರುಕು ಮುಟ್ಟಿಸಲು ಪೂರಕವಾಗಿರುತ್ತದೆ. ಆ ಮೂಲಕ ಮಾನವೀಯ ಮೌಲ್ಯ ವರ್ಧನೆಯೂ ಆಗುವುದು. ಬದುಕಿನಲ್ಲಿ ಸದ್ವಿಚಾರಗಳಲ್ಲಿ ತೊಡಗಿಸಿಕೊಂಡಾಗ ಜೀವನ ಸುಲಲಿತವಾಗಬಹುದು” […]
Read More
Date : Monday, 26-06-2023
“ಸಮರ್ಪಣಾ ಭಾವದ ಸೇವೆಗೆ ಅನುಗ್ರಹ ಪ್ರಾಪ್ತಿ” ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಪುತ್ತೂರು ಘಟಕದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ ಪುತ್ತೂರು, ಜೂ.6: “ಧರ್ಮ ರಕ್ಷಣೆಯಾಗದಿದ್ದಲ್ಲಿ ಸಮಾಜದಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಧರ್ಮಾಧಾರಿತ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಗುರು ಎಂದರೆ ಜ್ಯೇಷ್ಠ ಎಂದರ್ಥ. ಗುರುವಿನ ಅನುಗ್ರಹ ಪಡೆದರೆ ನಾವೂ ಭವಸಾಗರವನ್ನೂ ದಾಟಬಹುದು. ಕ್ಷಿಪ್ರ ಅನುಗ್ರಹ ಲಭಿಸಬೇಕಾದರೆ ಗುರುವಿನ ಅನುಗ್ರಹ ಪಡೆಯಬೇಕು. ಶ್ರೀ ಗುರುದತ್ತಾತ್ರೇಯರ […]
Read More
Date : Monday, 26-06-2023
“ಸಂಘಟನಾತ್ಮಕವಾಗಿ ಕಾರ್ಯ ಮಾಡಿದಾಗ ಅಭಿವೃದ್ಧಿ ಸಾಧ್ಯ” ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಬೆಳ್ಳಾರೆ ವಲಯದ ವಾರ್ಷಿಕೋತ್ಸವ-ಸಾರ್ವಜನಿಕ ಶ್ರೀ ಸತ್ಯದತ್ತವ್ರತ ಪೂಜೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ ಬೆಳ್ಳಾರೆ, ಜೂ.7: “ಸಮಾಜದ ಪರಿವರ್ತನೆಗೆ ಸಂಘ-ಸಂಸ್ಥೆಗಳು ಪೂರಕವಾಗಿದೆ. ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ. ಯುವ ಶಕ್ತಿಯಿಂದ ದೇಶ ಕಟ್ಟುವ ಕೆಲಸ ಆಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಸಂಚಾಲಿತ ಒಡಿಯೂರು […]
Read More
Date : Monday, 26-06-2023
“ಧರ್ಮದ ಹಂಗಿಲ್ಲ ತುಳುಭಾಷೆಗೆ ಕರ್ನಾಟಕ ರಾಜ್ಯ ಭಾಷೆಯ ಸ್ಥಾನಮಾನ ಸಿಗಬೇಕು” ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಭವನದಲ್ಲಿ ಜರಗಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಮಂಗಳೂರು ಜೂ.1: “ತುಳುಭಾಷೆಗೆ ಮತ-ಧರ್ಮಗಳ ಹಂಗಿಲ್ಲದ ಸುಲಲಿತ ಭಾಷೆ. ಆದುದರಿಂದಲೇ ತುಳು ಭಾಷೆಯನ್ನು ಸುಲಭವಾಗಿ ಮಾತನಾಡಬಹುದಾಗಿದೆ. ತುಳು ಭಾಷೆಗೆ ರಾಜ್ಯ ಭಾಷೆಯ ಸ್ಥಾನ ಸಿಗಲೇಬೇಕು ಮತ್ತು ತುಳುಭಾಷೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎನ್ನುವುದು ಎಲ್ಲ ತುಳುಬಂಧುಗಳ ಅಪೇಕ್ಷೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ […]
Read More
Date : Monday, 26-06-2023
ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವ 2023ರ ಸಮಾಲೋಚನಾ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ ಜೂ.11: “ತ್ಯಾಗ ತುಂಬಿದ ಸೇವೆಗೆ ಹೆಚ್ಚು ಮಹತ್ವ, ಸೇವಾವೃತ್ತಿ ಬದುಕಿನ ಭಾಗ ಮತ್ತು ಅದು ನಮ್ಮ ಕರ್ತವ್ಯವಾಗಿರಬೇಕು. ಸೇವೆ ಎಂದರೆ ಮನಸ್ಸನ್ನು ಗೆಲ್ಲುವ, ಆರೋಗ್ಯ ಕಾಪಾಡುವ ಉದ್ದೇಶದೊಂದಿಗೆ ರಾಷ್ಟ್ರ ನಿರ್ಮಾಣದ ಪರಿಕಲ್ಪನೆ ಇದರಲ್ಲಿ ಅಡಗಿದೆ. ಸೇವಾ ಚಟುವಟಿಕೆ ನಿರಂತರ ನಡೆಯುತ್ತಿರಬೇಕು. ಹುಟ್ಟುಹಬ್ಬದ ಉದ್ದೇಶ ಸಮಾಜ ಅಭಿವೃದ್ಧಿಯಾಗಿದೆ. ಪ್ರಕೃತಿ ಉಳಿಸುವ ಕಾರ್ಯದಲ್ಲಿ ಯುವಶಕ್ತಿ ಮುಂಚೂಣಿಯಲ್ಲಿರಬೇಕು. ಗ್ರಾಮೋತ್ಸವವು ಸೇವಾಸಂಭ್ರಮವಾಗಲಿ” ಎಂದು ಪರಮಪೂಜ್ಯ ಶ್ರೀ ಶ್ರೀ […]
Read More
Date : Monday, 26-06-2023
“ಬದುಕು ಉಜ್ವಲತೆಯಿಂದ ಕೂಡಿರಲು ಧರ್ಮಪ್ರಜ್ಞೆ ಅಗತ್ಯ” ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಾಲಾ ಪ್ರಾರಂಭೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಮೇ.31: “ನಾವು ಏನೇ ಮಾಡಿದರು ಆರಂಭ ಮತ್ತೆ ಅಂತ್ಯದ ಅರಿವಿರಬೇಕು. ನಮ್ಮ ಮನದಲ್ಲಿ ದಿನವೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಚಾರವಿದು. ಅದರ ನಡುವೆ ಇರುವುದೇ ಜೀವನ. ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಆಧ್ಯಾತ್ಮಿಕತೆ ಬದುಕಿನಲ್ಲಿ ಬೆಳೆಸಿಕೊಳ್ಳುವ ಜೊತೆಗೆ ನಾವು ಸ್ನೇಹ ಜೀವಿಗಳಾಗಿರಬೇಕು. ಗುರುಕುಲ ಮಾದರಿಯ ಶಿಕ್ಷಣ ಕೊಡಿಸುವರೆ ಮಾತೆಯರು ಸಿದ್ದರಾಗಿದ್ದಾರೆ. ರಾಷ್ಟ ನಿರ್ಮಾಣದಲ್ಲಿ ಯುವಪೀಳಿಗೆ ತೊಡಗಬೇಕಾದರೆ ಇಂತಹ ಶಿಕ್ಷಣದ […]
Read More
Date : Monday, 15-05-2023
ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2022-23ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 97.2% ಫಲಿತಾಂಶ ದಾಖಲಿಸುವುದರೊಂದಿಗೆ 9 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಒಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಕು| ಶ್ರೀರಕ್ಷಾ, 605 ಅಂಕ ಗಳಿಸಿ ಶಾಲೆ ಪ್ರಥಮ ಹಾಗೂ ಕು| ಶ್ರೀಕಾಂತ್ ಪಿ., 592 ಅಂಕ ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. 90%ಕ್ಕಿಂತ ಹೆಚ್ಚು ಅಂಕ ಗಳಿಸಿದವರು: ಕು| ಸಾನಿಧ್ಯ -570, ಕು| ಸಿ.ಎಚ್. ಸನ್ನಿಧಿ-566, ಕು| ಪ್ರೀತೇಶ್-575
Read More
Date : Monday, 24-04-2023
“ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದಿಂದ ಅತ್ಯುತ್ತಮ ಸಾಧನೆ” – ಎ. ಸುರೇಶ್ ರೈ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯ ಆಶೀರ್ವಾದದೊಂದಿಗೆ ಸಾದ್ವಿ ಶ್ರೀ ಶ್ರೀ ಮಾತಾನಂದಮಯೀಯವರ ಗೌರವ ಮಾರ್ಗದರ್ಶನದೊಂದಿಗೆ 2011ರಲ್ಲಿ ಆರಂಭವಾದ ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘವು ಸಮಾಜಮುಖಿಯಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಸಹಕಾರಿಯು 2022-2023ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.3.40 ಕೋಟಿ ಲಾಭ ಗಳಿಸಿದೆ.ಇದು ಕಳೆದ ವರ್ಷದ ಲಾಭ ರೂ.2.58 ಕೋಟಿ ರೂಪಾಯಿಗೆ ಹೋಲಿಸಿದರೆ ಶೇ.32 ಏರಿಕೆಯಾಗಿರುತ್ತದೆ. ಸಹಕಾರಿಯ […]
Read More
Date : Monday, 24-04-2023
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಪಂಜ ವಲಯದ ವಾರ್ಷಿಕೋತ್ಸವ-ಸಾಮೂಹಿಕ ಶ್ರೀ ಸತ್ಯದತ್ತವೃತ ಪೂಜೆ ಪಂಜ, ಎ.12: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪಂಜ ವಲಯ ವಾರ್ಷಿಕೋತ್ಸವ-ಸಾಮೂಹಿಕ ಶ್ರೀ ಸತ್ಯದತ್ತವೃತ ಪೂಜೆಯ ಸಮಾರಂಭವನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.ಸಮಾರಂಭದಲ್ಲಿ ಮಾಜಿ ಸೈನಿಕರಾದ ಶ್ರೀ ಲಕ್ಷ್ಮಣ ಬೇರ್ಯ, ಹೈನುಗಾರರಾದ ಶ್ರೀ ದೇವದಾಸ್ ರೈ ಕೆಬ್ಲಾಡಿ, ಶಿಕ್ಷಕ ಶ್ರೀ […]
Read More