Date : Monday, 10-04-2017
ಶ್ರೀ ಸಂಸ್ಥಾನದಲ್ಲಿ ಸಾಂಸ್ಕೃತಿಕ ಸಂಘಟನೆಯಾದ ಜೈ ಗುರುದೇವ ಕಲಾಕೇಂದ್ರ ಯಕ್ಷಗಾನ, ನಾಟಕ, ನೃತ್ಯ ಮತ್ತು ಸಂಗೀತದಲ್ಲಿ ಯುವಪ್ರತಿಭೆಗಳಿಗೆ ತರಬೇತಿ ನೀಡುತ್ತಿದೆ. ಯಕ್ಷಗಾನ ಹವ್ಯಾಸಿ ತಂಡವು ಪರಿಣಿತ ತರಬೇತುದಾರರಿಂದ ಶಿಕ್ಷಣ ಪಡೆದು ಶ್ರೀ ಸಂಸ್ಥಾನದಲ್ಲಿ ಮತ್ತು ಬೇರೆ ಕಡೆ ಸಂಘಟಕರ ಅಪೇಕ್ಷೆಯಂತೆ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಿದೆ. ಶ್ರೀ ಸಂಸ್ಥಾನದಲ್ಲಿ ಮಹಿಳಾ ಯಕ್ಷಗಾನ ತಂಡ, ಮಹಿಳಾ ನಾಟಕ ತಂಡ ಕ್ರೀಯಾಶೀಲವಾಗಿದೆ.
Read More
Date : Monday, 10-04-2017
ಶ್ರೀರಾಮ ನವಮಿಯಿಂದ ಅಖಂಡ ಭಗವನ್ನಾಮ ಸಂಕೀರ್ತನೆ ಆರಂಭಗೊಂಡು ಶ್ರೀ ಸಂಸ್ಥಾನದ ಆರಾಧ್ಯಮೂರ್ತಿ ಹನುಮ ಜಯಂತಿಯಂದು ಸಮಾಪನಗೊಳ್ಳುವುದು. ಶ್ರೀಮದ್ರಾಮಾಯಣ ಯಜ್ಞ, ಧಾರ್ಮಿಕ ಗೋಷ್ಠಿ, ವಿಶೇಷ ವೈದಿಕ ಕಾರ್ಯಕ್ರಮಗಳೊಂದಿಗೆ ಹನುಮ ಜಯಂತಿ ಸಂಪನ್ನಗೊಳ್ಳುವುದು. ” order_by=”sortorder” order_direction=”ASC” returns=”included” maximum_entity_count=”500″]
Read More
Date : Monday, 10-04-2017
ಶ್ರೀ ಸಂಸ್ಥಾನದ ಪ್ರತಿಷ್ಠಾ ಮುಹೂರ್ತವನ್ನು ಪ್ರತಿವರ್ಷ ವಾರ್ಷಿಕೋತ್ಸವಾಗಿ ಆಚರಿಸಲಾಗುತ್ತಿದ್ದು, 2001ರಿಂದ ಒಡಿಯೂರು ರಥೋತ್ಸವವಾಗಿದೆ. ಒಡಿಯೂರು ರಥೋತ್ಸವ 2014 ರಿಂದ ತುಳುನಾಡ ಜಾತ್ರೆಯಾಗಿ ಸಂಭ್ರಮದ ಪರ್ವ ವಾಗಿದೆ. ಇದೊಂದು ಕಣ್ಣಿಗೆ ಹಬ್ಬವಾಗಿ ಈ ನಾಡಿನ ಅಪೂರ್ವ ಉತ್ಸವವಾಗಿ ದಾಖಲಾಗಿದೆ. ಸುಮಾರು 12 ಕಿ.ಮೀ. ಕ್ರಮಿಸುವ ಶ್ರೀ ದತ್ತಗುರು, ಪ್ರಾಣದೇವರ ಒಡಿಯೂರು ರಥೋತ್ಸವ ಜನಮನವನ್ನು ಆಕರ್ಷಿಸುವ ಹಬ್ಬವಾಗಿದೆ. ನವರತ್ನಖಚಿತವಾದ ಶ್ರೀ ದತ್ತಗುರು ಸ್ವರ್ಣಪಾದುಕೆಗಳನ್ನು ಮತ್ತು ಅಭಯ ಹಸ್ತದ ಭವ್ಯವಾದ ಪ್ರಾಣದೇವರ ಉತ್ಸವಮೂರ್ತಿಯನ್ನು ವೇದಘೋಷ, ಪಂಚ ವಾದ್ಯಗಳ ನಿನಾದದೊಂದಿಗೆ ರಥದಲ್ಲಿ ರಿಸಲಾಗುತ್ತದೆ. […]
Read More
Date : Sunday, 09-04-2017
ಪ್ರಾಚೀನ ಭಾರತೀಯ ಸಂಸ್ಕøತಿಯನ್ನು ಕಾಪಿಟ್ಟುಕೊಳ್ಳುವುದರ ಜೊತೆಜೊತೆಗೆ, ಇಂದಿನ ಜಾಗತೀಕರಣದ ಹಾಗೂ ಡಿಜಿಟಲೀಕರಣದ ಯುಗಕ್ಕೆ ಹೊಂದಿಕೊಳ್ಳುವಂತ ವಿಜ್ಞಾನದ ಆಧುನಿಕ ಆವಿಷ್ಕಾರಗಳನ್ನು ಮೈಗೂಡಿಸಿಕೊಂಡು, ದೃಶ್ಯ -ಶ್ರಾವ್ಯ ಎರಡನ್ನು ಒಳಗೊಂಡ ಸೆಟಲೈಟ್ ಬೇಸ್ಡ್ ಸ್ಮಾರ್ಟ್ ಕ್ಲಾಸುಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ನಡೆಸಲಾಗುತ್ತಿದೆ. ದೂರದಿಂದ ಬರುವ ವಿದ್ಯಾರ್ಥಿಗಳಿಗಾಗಿ ಶಾಲಾ ವಾಹನದ ವ್ಯವಸ್ಥೆ ಇರುತ್ತದೆ. ಹಿರಿಯ ಅನುಭವಿ ಶಿಕ್ಷಕರೊಂದಿಗೆ, ಉತ್ಸಾಹಿ ಯುವ ಶಿಕ್ಷಕರನ್ನು ಕೂಡಿಸಿಕೊಂಡು ಹಳೆಬೇರು – ಹೊಸ ಚಿಗುರು ಎಂಬಂತೆ ನಿರೂಪಿಸಲಾಗಿದೆ. ಸ್ಥಳೀಯ ವಿದ್ಯಾರ್ಥಿಗಳೊಂದಿಗೆ, ಗಡಿಯ ಆಚೆಗಿನ ಕೇರಳದ ಗಡಿನಾಡ ವಿದ್ಯಾರ್ಥಿಗಳೂ ಸೇರಿಕೊಂಡಿದ್ದಾರೆ. ಭಾರತದ […]
Read More
Date : Sunday, 09-04-2017
ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನ ಒಂದು ವಿಶಿಷ್ಟ ಸಾಂಸ್ಕೃತಿಕ ಕೇಂದ್ರವಾಗಿ ಜ್ಞಾನಸತ್ರದ ಪುಣ್ಯ ನೆಲೆಯಾಗಿ ಗುರುತತ್ವದ ಪ್ರಚಾರದ ದತ್ತಪೀಠವಾಗಿ, ಕಲೆ, ಸಾಹಿತ್ಯ ಸಂಸ್ಕೃತಿ , ಸಂಗೀತದ ಆಸರೆಯಾಗಿ, ತುಳು ಭಾಷಾಭಿಮಾನ ಬೆಳೆಸುವ ದೇಗುಲವಾಗಿ ಬೃಹದೆತ್ತರಕ್ಕೆ ವ್ಯಾಪಿಸಿದೆ. ಶ್ರೀ ಸಂಸ್ಥಾನದಲ್ಲಿ ಭಗವತ್ ಆರಾಧನೆಯಂತೆಯೇ ಕಲಾರಾಧನೆಗೂ ಪ್ರಾಮುಖ್ಯ ನೀಡಲಾಗಿದೆ. ಇಲ್ಲಿ ನಿರ್ಮಾಣಗೊಂಡಿರುವ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಶ್ರೀ ಸಂಸ್ಥಾನದಲ್ಲಿ ನಡೆಯುವ ವಿಶೇಷ ಉತ್ಸವಗಳು, ಧಾರ್ಮಿಕ ಸಭೆ-ಸಮಾರಂಭಗಳು, ಕಲೆ-ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತದೆ. ಸತ್ಸಂಗ, ವಿಚಾರ ಗೋಷ್ಠಿಗಳು, ಯಕ್ಷಗಾನ, ಸಂಗೀತ, […]
Read More
Date : Friday, 07-04-2017
ನಾವು ಹುಟ್ಟುಹಬ್ಬವನ್ನು ದೀಪವನ್ನು ಉರಿಸುವ ಮೂಲಕ ಮಾಡಬೇಕೇ ಹೊರತು ಆರಿಸಿ ಅಲ್ಲ. ಆ ದೀಪ ಮಕ್ಕಳ ಬದುಕಿಗೆ ಬೆಳಕಾಗಬೇಕೆಂಬುದು ನಮ್ಮೆಲ್ಲರ ಆಶಯ. ಬದುಕು ಶಿಕ್ಷಣಕ್ಕೆ ಒತ್ತುಕೊಡಬೇಕು. ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಪ್ರೋತ್ಸಾಹ ನೀಡಬೇಕು. ಮಕ್ಕಳಲ್ಲಿ ಪ್ರಶ್ನೆ ಹುಟ್ಟುವುದು ಸ್ವಾಭಾವಿಕ. ಆದರೆ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವುದು ನಮ್ಮ ಕರ್ತವ್ಯ. ಆ ಮೂಲಕ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಒಡಿಯೂರು ಶ್ರೀ […]
Read More
Date : Friday, 07-04-2017
ವ್ಯಕ್ತಿ ವಿಕಾಸವಾಗದೆ ರಾಷ್ಟ್ರ ವಿಕಾಸವಾಗುವುದಿಲ್ಲ. ನಾವು ಭಾರತ ದೇಶದ ರಥವನ್ನು ಓಡಿಸುವವರಾಗಬೇಕು. ಬಾರತ ಎಂದರೆ ಬೆಳಕಿನಿಂದ ಕೂಡಿದ್ದು ಎಂದರ್ಥ. ನಾವೆಲ್ಲರೂ ಭಾರತದ ರಥದ ಸಾರಥಿಯಾಗಬೇಕು. ಆಧ್ಯಾತ್ಮದ ಬೆಳಕು ನಮ್ಮಲ್ಲಿ ಬೆಳಗಬೇಕು. ಬದುಕು ಬೆಳಗಬೇಕಾದರೆ ಸಂಸ್ಕಾರ ಬೇಕು. ವಿಶ್ವ ಎನ್ನುವುದು ವಿಶ್ವ ವಿದ್ಯಾಲಯವಿದ್ದಂತೆ, ನಾವು ನಿರಂತರವಾಗಿ ಕಲಿಯುವಂತವರಾಗಬೇಕು. ನಮ್ಮ ವಿಕಾಸವನ್ನು ನಾವೇ ಮಾಡಿಕೊಳ್ಳಬೇಕು. ನಾವು ಯಾರೆಂಬ ಅರಿವು ನಮಗಿರಬೇಕು. ಎಂಬುದಾಗಿ ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಸಂಪನ್ನಗೊಂಡ ಬಾಲವಿಕಾಸ ಸಮಾವೇಶದ ಉದ್ಘಾಟನೆಯನ್ನು ದೀಪೋಜ್ವಲನದ ಮುಖೇನ ನೆರವೇರಿಸಿದ ಪರಮಪೂಜ್ಯ […]
Read More
Date : Wednesday, 05-04-2017
ಹನುಮ ಜಯಂತಿ: ಶ್ರೀರಾಮ ನವಮಿಯಿಂದ ಅಖಂಡ ಭಗವನ್ನಾಮ ಸಂಕೀರ್ತನೆ ಆರಂಭಗೊಂಡು ಶ್ರೀ ಸಂಸ್ಥಾನದ ಆರಾಧ್ಯಮೂರ್ತಿ ಹನುಮ ಜಯಂತಿಯಂದು ಸಮಾಪನಗೊಳ್ಳುವುದು. ಶ್ರೀಮದ್ರಾಮಾಯಣ ಯಜ್ಞ, ಧಾರ್ಮಿಕ ಗೋಷ್ಠಿ, ವಿಶೇಷ ವೈದಿಕ ಕಾರ್ಯಕ್ರಮಗಳೊಂದಿಗೆ ಹನುಮ ಜಯಂತಿ ಸಂಪನ್ನಗೊಳ್ಳುವುದು. ನಾಗರಪಂಚಮಿ : ಶ್ರೀ ಸುಬ್ರಹ್ಮಣ್ಯ ದೇವರ ವಿಶೇಷ ಸಾನಿಧ್ಯವಿರುವ ಶ್ರೀ ಸಂಸ್ಥಾನದಲ್ಲಿ ನಾಗರಪಂಚಮಿಯಂದು ಸಾರ್ವಜನಿಕ ಆಶ್ಲೇಷ ಬಲಿ ಪೂಜೆ ಜರಗುವುದು. ನಾಗದೋಷ ಪರಿಹಾರಕ್ಕೆ ಸಂಬಂಧಿಸಿದ ಸೇವೆ ಆರಾಧನೆಗಳು ಈ ಸಂದರ್ಭದಲ್ಲಿ ಶ್ರೀ ಸುಬ್ರಾಯ ದೇವರಿಗೆ ಸಲ್ಲಿಸುವುದು ವಿಶೇಷವಾಗಿದೆ. ಲಲಿತಾಪಂಚಮಿ : ನವರಾತ್ರಿಯ ಪರ್ವಕಾಲದಲ್ಲಿ […]
Read More
Date : Tuesday, 04-04-2017
ಕನ್ಯಾನ ಮತ್ತು ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಿಗೆ ಸಕಲ ಸೌಕರ್ಯಗಳನ್ನೊಳಗೊಂಡ ಉತ್ತಮ ತಾಂತ್ರಿಕ ತರಬೇತಿ ನೀಡುವ ಉದ್ದೇಶದಿಂದ ಶ್ರೀ ಗುರುದೇವ ಪಬ್ಲಿಕ್ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಒಡಿಯೂರು ಇದರ ವತಿಯಿಂದ ಉದ್ಯೋಗ ಖಾತ್ರಿಯ ಒಡಿಯೂರು ಶ್ರೀ ಗುರುದೇವ ಐಟಿಐ (ಪ್ರೈ) ಅನ್ನು ಕನ್ಯಾನದಲ್ಲಿ ಫೆ. 12, 2012ರಂದು ಪ್ರಾರಂಭಿಸಲಾಯಿತು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಡಿ.ವಿ. ಸದಾನಂದ ಗೌಡ ಅವರು ಐಟಿಐ ಅನ್ನು ಉದ್ಘಾಟಿಸಿದರು. ಒಡಿಯೂರು ಐಟಿಐಯಲ್ಲಿ ಡ್ರಾಪ್ಟ್ಸ್ಮೆನ್ ಸಿವಿಲ್, ಇಲೆಕ್ಟ್ರೀಷಿಯನ್ ಮತ್ತು ಮೆಕಾನಿಕ್ಸ್ ರೆಫ್ರೀಜರೇಷನ್ ಮತ್ತು ಎರ್ಕಂಡೀಷನಿಂಗ್ ಎಂಬ […]
Read More
Date : Tuesday, 04-04-2017
ಪೂಜ್ಯ ಸ್ವಾಮೀಜಿಯವರು ಪ್ರತಿ ವರ್ಷ ಎರಡು ಬಾರಿ ತೀರ್ಥ ಕ್ಷೇತ್ರ ಸಂಚಾರವನ್ನು ಶಿಷ್ಯವರ್ಗದವರೊಂದಿಗೆ ಕೈಗೊಳ್ಳುವರು. ಶ್ರೀ ಗುರುದೇವ ಸೇವಾ ಬಳಗದ ಸದಸ್ಯರು ಪೂಜ್ಯಶ್ರೀಗಳೊಂದಿಗೆ ತೀರ್ಥಾಟನೆಗೆ ಹೋಗುತ್ತಾರೆ. ಸಾಧು-ಸಂತರ, ಋಷಿಮುನಿಗಳ, ಯತಿವರ್ಯರ ಪುಣ್ಯ ಪಾದಸ್ಪರ್ಶದಿಂದ ತೀರ್ಥಗಳು ಪುನೀತವಾಗುತ್ತವೆಯಂತೆ. ಪೂಜ್ಯಶ್ರೀಗಳು ಹೇಳುವಂತೆ ‘ಲೋಕಸಂಚಾರ, ತೀರ್ಥಕ್ಷೇತ್ರ ಸಂಚಾರದಿಂದ ಅನುಭವ ಪಕ್ವವಾಗುತ್ತದೆ. ಸ್ವಾನುಭವದಿಂದ ಗಳಿಸಿದ ಜ್ಞಾನವೇ ಸುಜ್ಞಾನ’.
Read More