ಅ.8ರಿಂದ 10ರ ತನಕ ರಂದು ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ
ಶಾಲಾ ಮಕ್ಕಳಿಗೆ ಶರದೃತು ಸಂಸ್ಕಾರ ಶಿಬಿರ
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಅ.8ರಿಂದ 10ರ ತನಕ ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಶಾಲಾ ಮಕ್ಕಳಿಗೆ ಶರದೃತು ಸಂಸ್ಥಾರ ಶಿಬಿರವನ್ನು ಆಯೋಜಿಸಲಾಗಿದೆ. ಅ.8ರಂದು ಆದಿತ್ಯವಾರ ಬೆಳಿಗ್ಗೆ ಶಿಬಿರವನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳು ಯೋಗ, ರಂಗಕಲೆ, ಚಿತ್ರಕಲೆ, ಕರಕುಶಲ(ಪೇಪರ್ ಕ್ರಾಫ್ಟ್) ಮುಂತಾದ ತರಬೇತಿಗಳನ್ನು ನೀಡಲಿರುವರು.