ಶ್ರೀ ಗುರುದೇವ ಹಿರಿಯ ಪ್ರಾಥಮಿಕ ಶಾಲೆ ಒಡಿಯೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಮೂಹಿಕ ವಿಭಾಗದ ದೇಶಭಕ್ತಿ ಸ್ಪರ್ಧೆಯಲ್ಲಿ ಕು. ದೀಪಶ್ರೀ, ಕು. ಅಚಿಂತ್ಯಾಗೌರಿ, ಕು. ಸ್ಮಿತಾ, ಕು. ದಿವ್ಯಲಕ್ಷ್ಮಿ, ಕು. ಕೃತಿ ಶೆಟ್ಟಿ, ಕು. ಶ್ರೀರಕ್ಷಾ ಇವರು ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕು. ದೀಪ ಶ್ರೀ ವೈಯಕ್ತಿಕ ವಿಭಾಗದ ಸಂಸ್ಕೃತ ಪಠಣ ಸರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಸಂಸ್ಕೃತ ಕಂಠಪಾಠದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. ಹಾಗೂ ಹಿರಿಯರ ವಿಭಾಗದ ಚಿತ್ರಕಲೆ ಸ್ಪರ್ಧೆಯಲ್ಲಿ ಕು. ಮೈತ್ರಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ.