Category Uncategorized

“ಪ್ರೀತಿ-ವಿಶ್ವಾಸಕ್ಕೆ ಇನ್ನೊಂದು ಹೆಸರೇ ತುಳುವರು”೨೫ನೇ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ

“ತುಳುವರು ಮೃದು ಸ್ವಭಾವದ ವ್ಯಕ್ತಿತ್ವದವರು. ಪ್ರೀತಿ ವಿಶ್ವಾಸಕ್ಕೆ ಇನ್ನೊಂದು ಹೆಸರೇ ತುಳುವರು. ಕರಾವಳಿಗರಿಗೆ ಅವರದ್ದೇ ಆದ ಸ್ಥಾನಮಾನವಿದೆ. ಎಲ್ಲಾ ಕಡೆಗಳಿದಲೂ ತುಳು ಭಾಷೆಯ ಉಳಿವಿಗೆ ಪ್ರಯತ್ನವಾಗಬೇಕು. ಸಮ್ಮೇಳನದ ಉದ್ದೇಶವೇ ಸಮಾಜದ ಉನ್ನತಿಗೆ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ. ತುಳು ಭಾಷೆ ಮತ್ತು ತುಳು ಸಂಸ್ಕೃತಿ ವಿಶ್ವಮಾನ್ಯ. ತುಳುವರಿಗೆ ಎಲ್ಲೆಡೆಯೂ ಗೌರವವಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು. ಹೆತ್ತವರ…

ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆಯ ಸಂದರ್ಭದಲ್ಲಿ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರವನ್ನು ಲೋಕರ್ಪಣೆಗೊಳಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ

“ಆಧ್ಯಾತ್ಮಿಕ ಕೇಂದ್ರದ ಮೂಲಕ ಆಧ್ಯಾತ್ಮಿಕ ಮೌಲ್ಯಗಳನ್ನುತುಂಬುವ ಕಾರ್ಯ ನಡೆಯಲಿದೆ” ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆಯ ಸಂದರ್ಭದಲ್ಲಿ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರವನ್ನು ಲೋಕರ್ಪಣೆಗೊಳಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನಫೆ.೬: “ಭಾರತ ದೇಶದ ಆಂತರ್ಯವೇ ಅಧ್ಯಾತ್ಮ. ಅಧ್ಯಾತ್ಮದಿಂದ ಭಾರತದ ಮೌಲ್ಯ ವರ್ಧನೆ ಸಾಧ್ಯ. ಬದುಕಿನಲ್ಲಿ ಆಧ್ಯಾತ್ಮಿಕ ಶಿಕ್ಷಣವನ್ನು ಅಳವಡಿಸಿಕೊಂಡಾಗ ನಾವು ವಿಸ್ತೃತವಾಗಿ ಬೆಳೆಯಲು ಸಾಧ್ಯವಿದೆ. ಧರ್ಮ,…

ಸಂತ ಸಮಾಜಮುಖಿಯಾಗಿದ್ದಾಗ ಎಲ್ಲರಿಗೆ ಹಿತವಾಗುತ್ತದೆ

ವಿಟ್ಲ: ಸಂತ ಸಮಾಜಮುಖಿಯಾಗಿದ್ದಾಗ ಎಲ್ಲರಿಗೆ ಹಿತವಾಗುತ್ತದೆ. ದೀನರ ಸೇವೆಯಿಂದ ಭಗವಂತ ಸಂತೃಪ್ತನಾಗಿ ಅನುಗ್ರಹಿಸುತ್ತಾನೆ. ಭಾವನೆ ತುಂಬಿಕೊಂಡ ಸಂಗೀತ ಸಾಹಿತ್ಯ ಸೇರಿಕೊಂಡು ಭಾರತವಾಗಿದೆ. ನಮ್ಮ ಎಂಬ ಭಾವನೆಯಲ್ಲಿ ಕೆಲಸ ಕಾರ್ಯಗಳು ನಡೆಯಬೇಕು. ಆಧ್ಯಾತ್ಮವಿದ್ದಲ್ಲಿ ದ್ವೇಷಭಾವ ಇರಲು ಸಾಧ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಶ್ರೀ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ…

“ವ್ಯಕ್ತಿತ್ವ ವಿಕಸನಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕ”

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದ.ಕ. ವಿಟ್ಲ ಸ್ಥಳೀಯ ಸಂಸ್ಥೆಯ ಉತ್ಸವ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ದ.22: “ನಮ್ಮ ಬದುಕಿನಲ್ಲಿ ಶಿಸ್ತು ವಿಶೇಷವಾದ ಪಾತ್ರವನ್ನು ವಹಿಸುತ್ತದೆ; ವಹಿಸಬೇಕು. ಶಿಸ್ತಿನಿಂದಲೇ ಸ್ವಸ್ತಿ. ಶಿಸ್ತು ಇಲ್ಲದಿದ್ದರೆ ಬದುಕು ಬದುಕಾಗುವುದಿಲ್ಲ. ಬದುಕು ನಿಂತ ನೀರಾಗದೆ ನಿರಂತರ ಹರಿಯುವಂತಾಗಬೇಕು. ಬದುಕು ಸುಸೂತ್ರವಾಗಿ ನಡೆಯಬೇಕಿದ್ದರೆ ವ್ಯಕ್ತಿಯಲ್ಲಿ ವ್ಯಕ್ತಿತ್ವ ತುಂಬಿರಬೇಕು. ವ್ಯಕ್ತಿತ್ವವನ್ನು…

“ಗುರುಸೇವೆಯಿಂದ ಪರಮಾತ್ಮನ ಅನುಸಂಧಾನ ಸಾಧ್ಯ”

ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಮಾಪ್ತಿಯ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ ದ.೧೪: “ಪಾಶ್ಚಾತ್ಯ ಸಂಸ್ಕೃತಿ ನಮ್ಮಲ್ಲಿ ವ್ಯಾಪಕವಾಗುತ್ತಿದೆ. ಅವೆಲ್ಲವನ್ನು ಸರಿಪಡಿಸುವ ಕೆಲಸವಾಗಬೇಕು. ನಮ್ಮಲ್ಲಿರುವ ಅಹಂ ದೂರವಾಗಬೇಕು. ನಾನು ಎನ್ನುವ ಭಾವ ದೂರವಾಗಿ ನಮ್ಮದೆನ್ನುವ ಭಾವ ಎಲ್ಲರಲ್ಲು ಬರಬೇಕು. ಭಗವಾನ್ ದತ್ತಾತ್ರೇಯರ ಅವತಾರವೇ  ಜ್ಞಾನಾವತಾರವಾಗಿದೆ.  ವಿಶ್ವವನ್ನು ಗುರುವಾಗಿ ಆಯ್ಕೆ ಮಾಡಿಕೊಂಡವ ನಿಜವಾದ…

“ಪರಿವರ್ತನೆಯ ಶಕ್ತಿ ಗುರುತತ್ವಕ್ಕಿದೆ”

ಶ್ರೀ ದತ್ತ ಜಯಂತಿ ಮಹೋತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹಕ್ಕೆ ಚಾಲನೆ ನೀಡಿ, ಗುರುಭಕ್ತರಿಗೆ ಮಾಲಾಧಾರಣೆ ಮಾಡಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ದ.08: “ಜೀವನದಲ್ಲಿ ಗುರುದೀಕ್ಷೆ ಅತೀ ಅಗತ್ಯ. ಮಾನವೀಯತೆಯ ಕೊಂಡಿಯನ್ನು ಬಲಗೊಳಿಸುವ  ಕೆಲಸವಾಗಬೇಕು. ಪರಿವರ್ತನೆಯ ಶಕ್ತಿ ಗುರುತತ್ತ÷್ವಕ್ಕಿದೆ. ಆಧ್ಯಾತ್ಮಿಕ ಅರಿವು ನಮ್ಮೊಳಗಿರಬೇಕು. ಭಾವನೆಗಳು ಶುದ್ಧವಿದ್ದರೆ ದೈವಾನುಗ್ರಹ ಸಾಧ್ಯ. ಬದುಕಿನ ಸಮತೋಲನ ನಮ್ಮಲ್ಲಿರಬೇಕು. ದತ್ತತತ್ತ÷್ವ…

“ಗುರುಕುಲದ ಪುಟಾಣಿಗಳು ಜಗತ್ತನ್ನು ಬೆಳಗುವ ಕುಲದೀಪಕರಾಗಿ”

ಒಡಿಯೂರು ಶ್ರೀ ಗುರುದೇವ ಗುರುಕುಲಗಳ ‘ಗುರುಕುಲೋತ್ಸವ’ವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ದ.05: “ಗುರುಕುಲದ ಪುಟಾಣಿಗಳು ಜಗತ್ತನ್ನು ಬೆಳಗುವ ಕುಲದೀಪಕರಾಗಿ. ಬದುಕು ರೂಪಿಸುವ ಶಿಕ್ಷಣ ನೀಡುವ ಗುರುಕುಲಗಳು ಗ್ರಾಮ ಗ್ರಾಮಕ್ಕೆ ವಿಸ್ತರಣೆ ಮಾಡಲಾಗುವುದು. ಶಿಸ್ತು-ಸಂಯಮ ಮೈಗೂಡಿಸಿಕೊಂಡಾಗ ಬದುಕಿಗೆ ಯಾವುದೇ ಅಪಾಯವಿರುವುದಿಲ್ಲ. ಶ್ರೇಯಸ್ಸಿನ ಮಾರ್ಗ ಹಾಗೂ ಆಧ್ಯಾತ್ಮ ವಿದ್ಯೆ ಶ್ರೇಷ್ಠವಾಗಿದ್ದು, ಅದನ್ನು ಪ್ರತಿಯೊಬ್ಬರೂ ಅಳವಡಿಸಬೇಕಿದೆ” ಎಂದು ಪೂಜ್ಯ…

“ಅಧ್ಯಾತ್ಮಿಕತೆಯಿಂದ ನಮ್ಮ ಜೀವನದಲ್ಲಿ ನೆಮ್ಮದಿ, ಸಮತೋಲನ ಸಾಧ್ಯ”

ಪುಣೆ ಶ್ರೀ ಗುರುದೇವ ಸೇವಾ ಬಳಗ 21ನೇ ವಾರ್ಷಿಕೋತ್ಸವದಲ್ಲಿ – ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಪುಣೆ, ದ.01: “ಸಂಸ್ಕಾರವಿಲ್ಲದ ಶಿಕ್ಷಣ ಅಸಂಪೂರ್ಣ. ಮಕ್ಕಳು ಚಾರಿತ್ರö್ಯವಂತರಾಗಲು, ಗುಣವಂತರಾಗಲು, ಸಂಸ್ಕಾರವಂತರಾಗಲು ಮನೆಯಲ್ಲಿನ ನಮ್ಮ ಸಂಸ್ಕೃತಿ ಏನಿದೆಯೋ ಅದರ ಅರಿವನ್ನು ತಿಳಿಸಿಕೊಡುವ  ಜೊತೆಯಲ್ಲಿ ಧರ್ಮದ ಜ್ಞಾನ, ಪ್ರಜ್ಞೆಯನ್ನು ಮೂಡಿಸಬೇಕು. ಗುರು ದತ್ತಾತ್ರೇಯರ ಅವತಾರ ಎಂದರೆ ಅದು ಜ್ಞಾನದ ಅವತಾರ. ಭಗವಂತನ …