“ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಊರಿನಲ್ಲಿ ವಿದ್ಯಾಲಯ, ದೇವಾಲಯದ ಅಗತ್ಯವಿದೆ. ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಗೋಳಿತೊಟ್ಟು ವಲಯದ ವಾರ್ಷಿಕೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಅಶೀರ್ವಚನಎ.೧೬: “೪ಜಿ-೫ಜಿಯ ಇಂದಿನ ಆಧುನಿಕ ಯುಗದಲ್ಲಿ ಮಾತಾಜಿ, ಪಿತಾಜಿ, ಗುರೂಜಿ ಎಂಬ ತ್ರಿಜಿಗಳನ್ನು ಮರೆಯಬಾರದು. ನಿಸ್ವಾರ್ಥ ಸೇವೆ ಮತ್ತು ರಾಷ್ಟç ಸೇವೆ ಮಕ್ಕಳಿಂದ ಆರಂಭವಾಗಬೇಕು. ಈ ಬಗ್ಗೆ ಜಾಗೃತಗೊಳಿಸುವುದು ನಮ್ಮ ಕರ್ತವ್ಯವಾಗಿದೆ. ಅಹಂಕಾರವನ್ನು ತ್ಯಜಿಸುವುದೇ ಮಹಾತ್ಯಾಗ. ಅಹಂಕಾರ, ಮಮಕಾರ ಮರೆತರೆ ಭಗವಂತನ ಅನುಗ್ರಹ…