Category Uncategorized

“ಪ್ರಕೃತಿ-ಸಂಸ್ಕೃತಿಯನ್ನು ತಿಳಿಸುವ ಉದ್ದೇಶವಾಗಿದೆ”

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಇಪ್ಪತ್ತಾರನೇ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವನ್ನು ದೀಪೋಜ್ವಲನಗೊಳಿಸಿ ಉದ್ಘಾಟಿಸಿಪೂಜ್ಯ ಶ್ರೀಗಳವರಿಂದ ಆಶೀರ್ವಚನ“ತುಳು ಭಾಷೆ ಪಂಚದ್ರಾವಿಡ ಭಾಷೆಗಳಲ್ಲಿ ಮೊದಲ ಸ್ಥಾನದಲ್ಲಿದೆ. ಒಡೆದ ಮನಸ್ಸುಗಳನ್ನು ಒಂದು ಮಾಡುವ ಶಕ್ತಿ ‘ವಂದೇ ಮಾತರಂ’ ಗೀತೆಗೆ ಇದೆ. ಭಾರತೀಯತೆ ನಮ್ಮಲ್ಲಿ ತುಂಬಿಕೊ0ಡಿದೆ. ದೇಶ ಕಟ್ಟುವ ಕೆಲಸ ನಮ್ಮಿಂದಲೇ ಆಗಲಿ. ಭಾರತೀಯ ಪರಂಪರೆ-ಸ0ಸ್ಕೃತಿಯ ಉಳಿವಿಗೆ ನಾವು…

“ಶಿಸ್ತು – ಸಂಯಮ ಬದುಕಿನ ಎರಡು ಕಣ್ಣುಗಳಿದ್ದಂತೆ”

‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ“ದೇಶದ ಅಂದ ‘ವಂದೇ ಮಾತರಂ’ ಗೀತೆಯಲ್ಲಿದೆ. ಈ ನಿಟ್ಟಿನ ಈ ಒಂದು ಕಾರ್ಯಕ್ರಮದ ಆಯೋಜನೆಯಾಗಿದೆ. ಶಿಸ್ತು-ಸಂಯಮ ಬದುಕಿನ ಎರಡು ಕಣ್ಣುಗಳಿದ್ದಂತೆ. ಸೈನಿಕರ ಶಿಸ್ತು ಇತರರಿಗೆ ಮಾದರಿ. ಸೈನಿಕರ ತ್ಯಾಗದ ಮನೋಭಾವನೆ ಅಭಿನಂದನೀಯ. ಅವರ ತ್ಯಾಗದಿಂದ ದೇಶ ಇಂದಿಗೂ ಭದ್ರವಾಗಿದೆ. ದೇಶದ ಭದ್ರತೆಯಲ್ಲಿ…

“ಆರಾಧನೆಯ ಮೂಲಕ ಜೀವನದಲ್ಲಿ ನೆಮ್ಮದಿ ಮತ್ತುಸಂತೃಪ್ತಿ ಕಾಣಲು ಸಾಧ್ಯ”

ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವದ ಧರ್ಮಸಭೆಯಲ್ಲಿಪೂಜ್ಯ ಶ್ರೀಗಳವರಿಂದ ಧರ್ಮ ಸಂದೇಶ“ಅಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ. ಮನೆಯಿಂದಲೇ ಧರ್ಮ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಲಿ. ಜೀವನ ರಥ ಎಳೆಯುವುದು ಸುಲಭವಲ್ಲ. ಅದಕ್ಕೆ ದೈವೀಕೃಪೆ ಬೇಕು. ಆರಾಧನೆಯ ಮೂಲಕ ಜೀವನದಲ್ಲಿ ನೆಮ್ಮದಿ ಮತ್ತು ಸಂತೃಪ್ತಿ ಕಾಣಲು…

“ಹೊರೆಕಾಣಿಕೆ ಉತ್ಸವಕ್ಕೆ ಮುನ್ನುಡಿಯಾಗಿದೆ”

ವಿವಿಧ ಭಾಗಗಳಿಂದ ಶ್ರೀ ಸಂಸ್ಥಾನಕ್ಕೆ ಮೆರವಣಿಗೆಯ ಮೂಲಕ ಆಗಮಿಸಿದ ಹೊರೆಕಾಣಿಕೆಯನ್ನು ಸ್ವಾಗತಿಸಿ, ಉಗ್ರಾಣದಲ್ಲಿ ದೀಪೋಜ್ವಲನಗೊಳಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನಜ.೨೫: “ಹೊರೆಕಾಣಿಕೆ ಎಂಬುದು ಉತ್ಸವಕ್ಕೆ ಮುನ್ನುಡಿಯಾಗಿದೆ, ಬೇರೆ ಬೇರೆ ಭಾಗಗಳಿಂದ ಕ್ಷೇತ್ರಕ್ಕೆ ಬೇಕಾಗುವ ಸಾಮಾಗ್ರಿಗಳು ಬಂದು ತಲುಪಿದೆ. ಹೊರೆಕಾಣಿಕೆ ಬಹಳ ದೊಡ್ಡ ಸಂಭ್ರಮವಾಗಿ ನಡೆದಿದೆ. ಬೇರೆ ಬೇರೆ ಕಡೆಗಳಿಂದ ಗುರುಬಂಧುಗಳು ಒಟ್ಟು ಸೇರಿ ಜಾತ್ರೆಗೆ ಬೇಕಾದ ಸುವಸ್ತುಗಳನ್ನು…

ಜನವರಿ ೨೭-೨೮: ತುಳುನಾಡ ಜಾತ್ರೆ-ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜನವರಿ ೨೭ ಮತ್ತು ೨೮ರಂದು ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವ / ೨೬ನೇ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.ಜನವರಿ ೨೭ರಂದು ಜರಗುವ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದು, ಕದ್ರಿ ನವನೀತ ಶೆಟ್ಟಿ ಸಮ್ಮೇಳನದ…

“ಭಗವಾನ್ ದತ್ತಾತ್ರೇಯರು ವಿಶ್ವವನ್ನು ವಿದ್ಯಾಲಯವಾಗಿಸಿದವರು”

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ದತ್ತ ಜಯಂತ್ಯುತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹ – ಶ್ರೀ ದತ್ತ ಕೋಟಿನಾಮಜಪಯಜ್ಞ ಸಮಾಪ್ತಿ – ಶ್ರೀ ಗುರುದೇವದತ್ತ ಲಕ್ಷದೀಪಾವಳಿಯ ಧರ್ಮಸಭೆಯಲ್ಲಿ ಪೂಜ್ಯ ಒಡಿಯೂರು ಶ್ರೀಗಳವರಿಂದ ಅನುಗ್ರಹ ಸಂದೇಶ. ದ.೦೪: “ಭಗವಂತನನ್ನು ನೆನೆಯುವುದು ಜಪ. ಜಪ ಆಧ್ಯಾತ್ಮದ ಜೀವಾಳ. ದತ್ತ ಎಂದರೆ ಕೊಡಲ್ಪಟ್ಟದ್ದು ಎಂದರ್ಥ. ಭಗವಾನ್ ದತ್ತಾತ್ರೇಯರು…

“ವಿದ್ಯೆಯ ಜೊತೆಗೆ ಜ್ಞಾನವೂ ಹೊಂದಿರಲಿ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸ0ಸ್ಕಾರ’ ಕಾರ್ಯಕ್ರಮದಲ್ಲಿಪೂಜ್ಯ ಶ್ರೀಗಳವರಿಂದ ಸಂದೇಶ“ನಾವು ಮನಮಂಥನ ಮಾಡಬೇಕು. ಭಜನೆಯ ಮೂಲಕ ಸಂಸ್ಕಾರ – ಸಂಸ್ಕೃತಿಯ ಉಳಿವು. ಇದರಿಂದ ಶಿಸ್ತು ಸಂಯಮವೂ ಬೆಳೆಯುತ್ತದೆ. ಹಿಂದೆ ದಾಸರು ಮನೆಮನೆಗೆ ತೆರಳಿ ಭಜಿಸುತ್ತಿದ್ದರಂತೆ. ಅದು ಮನ-ಜನ ಜಾಗೃತಿಗೆ ಪೂರಕ. ಪರಿವರ್ತನೆಗೂ ದಾರಿ ಮಾಡಿಕೊಡುತ್ತದೆ. ಉತ್ಸಾಹವು ಶತ್ರುವಿನಂತಿರುವ ಮಿತ್ರ. ಉದಾಸೀನತೆ ಮಿತ್ರನಂತಿರುವ ಶತ್ರು. ಹಾಗಾಗಿ ನಾವು…

‘ಶ್ರೀ ಗುರುದೇವದತ್ತ ಲಕ್ಷ ದೀಪಾವಳಿಯ ಮೂಲಕ ಜ್ಞಾನದ ಜ್ಯೋತಿ ಬೆಳಗಲಿ”

‘ಶ್ರೀ ಗುರುದೇವದತ್ತ ಲಕ್ಷ ದೀಪಾವಳಿಯ ಮೂಲಕ ಜ್ಞಾನದ ಜ್ಯೋತಿ ಬೆಳಗಲಿ”ಶ್ರೀ ದತ್ತಜಯಂತ್ಯುತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹದ ಸುಸಂದರ್ಭ ಜರಗುವ ಶ್ರೀ ಗುರುದೇವದತ್ತ ಕೋಟಿ ನಾಮಜಪ ಯಜ್ಞ ಮತ್ತು ಲಕ್ಷ ದೀಪಾವಳಿಯ ಸಮಾಲೋಚನಾ ಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಆತ್ಮಜ್ಯೋತಿ ಬೆಳಗಿದಾಗಲೇ ಬದುಕು ಪಾವನವಾಗುವುದು. ಮನುಷ್ಯನಿಗೆ ಹುಟ್ಟಿನಿಂದಲೇ ಸಂಸ್ಕಾರ ಆರಂಭಗೊಳ್ಳುತ್ತದೆ. ದೀಪಕ್ಕೂ ಸಂಸ್ಕಾರ ಸಿಕ್ಕಿದರೆ ಚೆನ್ನಾಗಿ…

ದೀಪಾವಳಿಯ ಆಚರಣೆಯ ಮೂಲಕ ಅಂತರಂಗದ ಜ್ಯೋತಿ ಅರಳಲಿ

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಕಾಮ ಕ್ರೋಧ ಲೋಭ ಮೀರಿದರೆ ಬದುಕು ಸಾರ್ಥಕ. ಆ ಮೂಲಕ ಭಗವಂತನ ಅನುಸಂಧಾನ ಸಾಧ್ಯ. ಒಂದು ದೀಪದಿಂದ ಹಲವು ದೀಪ ಉರಿಸಬಹುದು. ನಾವು ಸಹ ಒಂದೊ0ದು ದೀಪಗಳಾಗಬೇಕು. ಹೃದಯದ ದೀಪ ಅರಳಿಸುವ ಕೆಲಸವಾಗಬೇಕು. ಅರಿಷಡ್ವೇಕಗಳನ್ನು ತೊಲಗಿಸುವ ಮೂಲಕ ಹೃದಯದ ದೀಪ ಅರಳಿಸಲು ಸಾಧ್ಯ. ದೀಪಕ್ಕೂ ಸಂಸ್ಕಾರ…