+91 8255-266211
info@shreeodiyoor.org

ತುಳು ಜಾನಪದ ನಲಿಕೆ-ತೆಲಿಕೆ ಪಂತೊ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜನವರಿ ತಿಂಗಳ 30, ಸೋಮವಾರ ಮತ್ತು 31, ಮಂಗಳವಾರ ‘ಶ್ರೀ ಒಡಿಯೂರು ರಥೋತ್ಸವ-ತುಳುನಾಡ ಜಾತ್ರೆ – 23ನೇ ತುಳು ಸಾಹಿತ್ಯ ಸಮ್ಮೇಳನ’ ಜರಗಲಿರುವುದು. ಅದರ ಅಂಗವಾಗಿ ತುಳುನಾಡಿನ ಸಾಂಸ್ಕøತಿಕ, ಕಲಾ, ನೃತ್ಯತಂಡಗಳಿಗೆ ‘ತುಳು ಜಾನಪದ ನಲಿಕೆ-ತೆಲಿಕೆ ಪಂತೊ’ವನ್ನು ಜನವರಿ 30ರಂದು ಸೋಮವಾರ ಮಧ್ಯಾಹ್ನ 1.30ರಿಂದ ಸಂಜೆ 5.30ರ ವರೆಗೆ ಏರ್ಪಡಿಸಲಾಗಿದೆ. ಎಲ್ಲ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದಾಗಿದೆ.

ತಂಡದ ಹೆಸರು, ಪೂರ್ಣ ವಿಳಾಸ, ನೃತ್ಯದ ವಿವರ, ಕಲಾವಿದರ ಸಂಖ್ಯೆ ಮುಂತಾದ ವಿವರಗಳಿರುವ ಅರ್ಜಿಯನ್ನು ಕೆಳಗೆ ನೀಡಿರುವ ವಿಳಾಸಕ್ಕೆ ಜನವರಿ 14ಕ್ಕೆ ಮುನ್ನ ತಲಪುವಂತೆ ಕಳಿಸಿಕೊಡಬೇಕು. ವಿಜೇತ ತಂಡಗಳಿಗೆ ಪ್ರಶಸ್ತಿಪತ್ರದೊಂದಿಗೆ ನಗದು
ಪ್ರಥಮ – ರೂ. 20,000.00
ದ್ವಿತೀಯ – ರೂ. 15,000.00
ತೃತೀಯ – ರೂ. 10,000.00  ಬಹುಮಾನಗಳನ್ನು ಅದೇ ದಿನ ಸಂಜೆಯ ಸಮಾರಂಭದಲ್ಲಿ ನೀಡಲಾಗುವುದು.

ನಿಬಂಧನೆಗಳು:
1. ತುಳು ಜಾನಪದ ಸಾಂಪ್ರದಾಯಿಕ ನಲಿಕೆ ಕಡ್ಡಾಯ.
2. “ತುಳು ಬಾಸೆ-ಸಂಸ್ಕøತಿದ ಪೊರ್ಲು ತಿರ್ಲ್”ದ ಪ್ರಸ್ತುತಿಗೆ ಅವಕಾಶ.
3. ಪ್ರದರ್ಶನದ ಅವಧಿ 20 ನಿಮಿಷ.
4. ಜಾನಪದ ವಾದ್ಯ ಪರಿಕರಗಳನ್ನೇ ಬಳಸಬೇಕು.
5. ಧ್ವನಿಮುದ್ರಿಕೆ ಬಳಸುವಂತಿಲ್ಲ.
6. ಗುತ್ತಿನ ಮನೆಯ ಅಂಗಳದಲ್ಲಿ ಪ್ರಸ್ತುತಪಡಿಸುವಂತೆ ಪ್ರದರ್ಶನ ನೀಡಬೇಕು.
7. ತಂಡದಲ್ಲಿ ಕನಿಷ್ಠ 10 ಮಂದಿ ಇರಬೇಕು.
8. ಜಾತಿ, ಧರ್ಮ, ದೈವ ನಿಂದನೆಗೆ ಅವಕಾಶವಿಲ್ಲ.
9. ಆಯ್ಕೆಯಾದ ತಂಡಗಳಿಗೆ ಮಾತ್ರ ಸ್ಪರ್ಧೆಗೆ ಅವಕಾಶ.
10. ಸ್ಪರ್ಧೆಯ ವಿಚಾರದಲ್ಲಿ ಸಂಘಟಕರ ನಿರ್ಣಯವು ಅಂತಿಮವಾಗಿರುತ್ತದೆ.

ವಿಳಾಸ:
ಸಂಯೋಜಕರು,
‘ತುಳು ಜಾನಪದ ನಲಿಕೆ-ತೆಲಿಕೆ ಪಂತೊ’
ತುಳು ಸಾಹಿತ್ಯ ಸಮ್ಮೇಳನ ಸಮಿತಿ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್,
ಅಂಚೆ: ಒಡಿಯೂರು-574243
ಮೊಬೈಲ್: 9480760799 | 9448123061

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top