Editor

Editor

“ಪಾರದರ್ಶಕತೆಯ ವ್ಯವಹಾರದಿಂದ ಸಹಕಾರಿಯು ಯಶಸ್ಸನ್ನು ಸಾಧಿಸಬಹುದು”- ಒಡಿಯೂರು ಶ್ರೀ

“ಸಹಕಾರಿಯು ಯಶಸ್ಸು ಸಾಧಿಸಲು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ವ್ಯವಹಾರದಲ್ಲಿ ಒಂದು ಬಾಹ್ಯ ಮತ್ತು ಇನ್ನೊಂದು ಅಂತರಂಗದ ವ್ಯವಹಾರ. ಲೌಕಿಕ ಬದುಕಿನಲ್ಲಿ ಬಾಹ್ಯ ವ್ಯವಹಾರದೊಂದಿಗೆ ಹೃದಯ ಶ್ರೀಮಂತಿಕೆ ಬೆಳೆಸಿಕೊಂಡಾಗ ಒಳಿತನ್ನು ಕಾಣಲು ಸಾಧ್ಯ. ಇದರಲ್ಲಿ ಸಮಾಜಮುಖಿ ಚಿಂತನೆ ಮತ್ತು ಪರಿಶುದ್ಧತೆ ಇರಬೇಕು. ಅಧ್ಯಾತ್ಮದ ಬದುಕಿಗೆ ಒಂದೇ ಉದ್ದೇಶ, ಸಮಾಜೋದ್ಧಾರಕ್ಕೆ ವಿವಿಧೋದ್ದೇಶ ಬೇಕು. ಇವೆಲ್ಲವೂ ನಮ್ಮ ಮನಸ್ಸಿನ…

“ಮೋಹ ಕ್ಷಯವಾಗದೆ ಮೋಕ್ಷ ದೊರಕದು” – ಒಡಿಯೂರು ಶ್ರೀ

  “ಬದುಕಿನಲ್ಲಿ ಬುದ್ಧಿ-ಸಿದ್ಧಿ, ಲಾಭ-ಶುಭಕ್ಕೆ ಗಣಪತಿ ಆರಾಧನೆ ಅಗತ್ಯ. ಜಲಾಧಿಪತಿಯಾದಂತಹ ಗಣಪತಿಯನ್ನು ಅರಸಿನ, ಗೋಮಯದಲ್ಲಿಯೂ ತಯಾರು ಮಾಡಿ ಆರಾಧಿಸುವುದಿದೆ. ನಮ್ಮಲ್ಲಿ ದೇವತ್ವವನ್ನು ತುಂಬಿಸಿಕೊಳ್ಳುವುದೇ ಆರಾಧನೆಯ ಉದ್ದೇಶ. ಅರ್ಥ, ಕಾಮದ ಮೋಹದಿಂದಾಗಿ ಧರ್ಮವನ್ನು ಮರೆಯಬಾರದು. ಅದು ನಮ್ಮನ್ನು ಅಧಃಪತನಕ್ಕೆ ಕೊಂಡೊಯ್ಯುತ್ತದೆ. ಮೋಹ ಕ್ಷಯವಾಗದೆ ಮೋಕ್ಷ ದೊರಕದು. ನಮ್ಮನ್ನೆಲ್ಲ ಸಂರಕ್ಷಣೆ ಮಾಡುವವನೇ ಗಣಪತಿ. ವಿಶ್ವವನ್ನೇ ಆವರಿಸಿರುವಂತಹ ರೋಗ ಒಂದೆಡೆಯಾದರೆ…

ಶ್ರೀಮದ್ಭಗವದ್ಗೀತೆಯಿಂದ ಲೌಕಿಕ-ಅಲೌಕಿಕ ಬದುಕಿಗೆ ಬೆಳಕು – ಒಡಿಯೂರು ಶ್ರೀ

ಪ್ರಪನ್ನ ಪಾರಿಜಾತಾಯ ತೋತ್ರವೇತ್ರೈಕಪಾಣಯೇ | ಜ್ಞಾನಮುದ್ರಾಯ ಶ್ರೀಕೃಷ್ಣಾಯ ಗೀತಾಮೃತದುಹೇ ನಮಃ || ನಿಮಗೆಲ್ಲಾ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ನಿಮಗೆಲ್ಲಾ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಶ್ರೀಕೃಷ್ಣ ಅವತಾರದ ಹಿಂದೆ ಒಂದು ಸತ್ಯ ಅಡಗಿದೆ. ಅಧರ್ಮವು ತಾಂಡವವಾಡುವಾಗ ನಿಯಂತ್ರಿಸುವುದಕ್ಕೆ ಧರ್ಮದ ರೂಪದಲ್ಲಿ ಭಗವಂತ ಅವತಾರ ಎತ್ತುತ್ತಾನೆ. ಅದರಲ್ಲಿ ಕೃಷ್ಣಾವತಾರವೂ ಒಂದು. ಕೃಷ್ಣ ಎನ್ನುವಾಗ ನಮಗೆಲ್ಲ ಮೂಡುವ…

ನೆರುಲ್ ಶ್ರೀ ಶನಿಮಂದಿರದಲ್ಲಿ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ, ಮುಂಬೈ ಸಮಿತಿಯ ಸರಣಿ ಕಾರ್ಯಕ್ರಮದ ಸಮಾರೋಪ

“ಮನುಷ್ಯ ಜೀವನದ ಸಾರ್ಥಕ್ಯದಲ್ಲಿ ಗುರುಗಳು ದೀಪವಿದ್ದಂತೆ” – ವಿದ್ವಾನ್ ಕೈರೆಬೆಟ್ಟು ವಿಶ್ವನಾಥ ಭಟ್ ಆಶಯ ನೆರುಲ್, ಆ. 5: “ಗುರುಗಳು ನಮಗೆ ಭಗವಂತನನ್ನು ಕಾಣುವುದಕ್ಕೆ ಒಂದು ನಿಮಿತ್ತ ಮಾತ್ರ. ಹೇಗೆ ಕತ್ತಲೆ ಇದ್ದಾಗ ಒಂದು ದೀಪದ ಬೆಳಕಿನಲ್ಲಿ ನಾವು ವಸ್ತುಗಳನ್ನೆಲ್ಲಾ ನೋಡುತ್ತೇವೆಯೋ ಅಂತೆಯೇ ಈ ಪ್ರಪಂಚ ಎನ್ನುವ ವಸ್ತುಗಳನ್ನು, ಈ ಜೀವನದ ರಹಸ್ಯಗಳನ್ನು ನಾವು ನೋಡುವರೇ…

ಮಾನವೀಯತೆಯ ಕೊಂಡಿ ಬಲಪಡಿಸುವ ಕಾರ್ಯವಾಗಬೇಕು

ಷಷ್ಠ್ಯಬ್ದ ಸಂಭ್ರಮ ಸಮಿತಿ, ಮಾಣಿ ವಲಯದ ಪ್ರಯುಕ್ತ ‘ಮನೆಗೊಂದು ಶ್ರೀಗಂಧದ ಸಸಿ – ಶ್ರೀಗಂಧ ಬೆಳೆಯೋಣ’ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಆಶೀರ್ವಚನ ಕೆದಿಲ, ಜು.25: “ನಿರ್ದಿಷ್ಟವಾದ ನಿಯಮಗಳನ್ನು ಪಾಲಿಸಿ ಬದುಕನ್ನು ರೂಪಿಸಬೇಕು. ಯುವಶಕ್ತಿ ಸದಾಚಾರದ ಒಲವನ್ನು ಹೊಂದಿದೆ. ಅದನ್ನು ಬೆಂಬಲಿಸಿ, ಸಮಾಜ ಪರಿವರ್ತನೆಯಾಗುವಂತೆ ಪ್ರೇರೇಪಿಸಬೇಕು. ಮಾನವೀಯತೆಯ ಕೊಂಡಿ ಸಡಿಲವಾಗಿದೆ. ಅದನ್ನು ಬಲಪಡಿಸುವ ಮಹತ್ ಕಾರ್ಯವಾಗಬೇಕು. ಸುಸಂಸ್ಕøತ…

ಯಶಸ್ಸಿನ ಗುಟ್ಟು ಪ್ರಯತ್ನಶೀಲತೆಯಲ್ಲಿ ಅಡಗಿದೆ

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆಯ ಸಂದರ್ಭ ಒಡಿಯೂರು ಶ್ರೀ ಆಶೀರ್ವಚನ” “ಜಗತ್ತು ನಿಯಮವನ್ನು ಅದೇ ರೂಪಿಸುತ್ತಿದೆ. ಅದಕ್ಕೆ ನಾವು ಒಗ್ಗಿಕೊಳ್ಳಬೇಕು. ನಮ್ಮಲ್ಲಿ ಇಚ್ಛಾ ಶಕ್ತಿ, ಕ್ರಿಯಾ ಶಕ್ತಿ ಇದ್ದರೆ ಸಾಲದು ಜ್ಞಾನ ಶಕ್ತಿಯೂ ಬೇಕು. ನಮ್ಮ ನಾಲಿಗೆಯ ತುದಿಯಂತೆ ಲಕ್ಷ್ಮೀಯು ಚಲನಶೀಲವಾಗಿರುವಳು. ಸಂಪತ್ತು ಮತ್ತು ಆಪತ್ತು ನಮ್ಮ ನಾಲಿಗೆಯಲ್ಲಿದೆ. ಅದಕ್ಕಾಗಿ ವಾಕ್…

“ವಿದ್ಯಾರ್ಥಿಗಳು ಭವ್ಯಭಾರತದ ಭವಿಷ್ಯವನ್ನು ರೂಪಿಸುವವರಾಗಬೇಕು”

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 2020-21ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 100% ಫಲಿತಾಂಶದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ “ಬದುಕಿಗೊಂದು ಉದ್ದೇಶವನ್ನು ನಾವು ರೂಪಿಸಬೇಕು. ಅದಕ್ಕೆ ಪೂರಕವಾದ ನಿಯಮಗಳನ್ನು ಅಳವಡಿಸಬೇಕಾಗುತ್ತದೆ. ‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂಬಂತೆ ಬಂಧನಗಳನ್ನು ಬಿಡುಗಡೆಗೊಳಿಸುವ ವಿದ್ಯೆ ನಮಗೆ ಅವಶ್ಯ. ವಿದ್ಯಾರ್ಥಿಗಳು ಭವ್ಯ ಭಾರತದ ಭವಿಷ್ಯವನ್ನು…

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ – ಎಸ್.ಎಸ್.ಎಲ್.ಸಿ. ಆಂಗ್ಲ ಮಾಧ್ಯಮ ಶಾಲೆ 100% ಫಲಿತಾಂಶ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆ 100% ಫಲಿತಾಂಶ ದಾಖಲಿಸಿದ್ದು, ದೀಪಶ್ರೀ – 619 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಮೈತ್ರಿ ಕೆ. – 605, ಶ್ರೇಯಸ್ – 603, ಹರ್ಷಿತಾ ಡಿ’ಸೋಜ – 601, ಪ್ರಥಮ್ ಶೆಟ್ಟಿ – 598, ಶೃಜನ್ ಸಿ.- 593, ರಜತ್…

“ದೇಶದ ಸಂಸ್ಕೃತಿಯನ್ನು ಯುವಪೀಳಿಗೆಗೆ ಹಸ್ತಾಂತರಿಸುವ ಕಾರ್ಯವಾಗಲಿ” ಸ್ವಾತಂತ್ರ್ಯ ದಿನಾಚರಣೆ – ಧ್ವಜಾರೋಹಣಗೈದು – ಒಡಿಯೂರು ಶ್ರೀ ಸಂದೇಶ

“ಭಾರತ ಎನ್ನುವ ಹೆಸರಿನಲ್ಲಿಯೇ ಅದರ ಸಂಸ್ಕøತಿ ಅಡಗಿದೆ. ನಾವೆಲ್ಲ ಅಮೃತಪುತ್ರರು. ನಮಗೆಲ್ಲ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುವ ಯೋಗ ಸಿಕ್ಕಿದೆ. ಈ ಸಂದರ್ಭ ದೇಶಕ್ಕಾಗಿ ಬಲಿದಾನಗೈದ ಸೈನಿಕರನ್ನು ಸ್ಮರಿಸುವುದೂ ನಮ್ಮ ಕರ್ತವ್ಯ. ಭಾರತ ದೇಶದ ಮೌಲ್ಯಗಳನ್ನು ಉಳಿಸಲು ದೇಶದ ಸಂಸ್ಕøತಿಯನ್ನು ಯುವಪೀಳಿಗೆಗೆ ಹಸ್ತಾಂತರಿಸುವ ಕಾರ್ಯವಾಗಬೇಕು. ಯುವಕರಲ್ಲಿ ರಾಷ್ಟ್ರಪ್ರೇಮದ ಬೀಜ ಬಿತ್ತಬೇಕು. ದುಶ್ಚಟಮುಕ್ತ ಸಮಾಜವಾಗಬೇಕಾದರೆ ಯುವಕರು ಜಾಗೃತರಾಗಬೇಕು.…

“ನಾಗಾರಾಧನೆ ಪ್ರಕೃತಿಯ ಆರಾಧನೆ” ನಾಗರ ಪಂಚಮಿ ಮಹೋತ್ಸವದಲ್ಲಿ ಒಡಿಯೂರು ಶ್ರೀ ದಿವ್ಯ ಸಂದೇಶ

“ನಾಗಾರಾಧನೆಯಲ್ಲಿ ಪ್ರಕೃತಿಯ ಆರಾಧನೆಯ ತತ್ತ್ವವಿದೆ. ಸಂಪತ್ತುಗಳ ಅಧಿಪತಿ ನಾಗರಾಜ. ನಾಗಾರಾಧನೆಯ ಹಿಂದೆ ಮೂಲ ಸಂಸ್ಕøತಿಯ ಅಂಶವಿದೆ. ಆಸ್ತಿಕ ಭಾವಕ್ಕೆ ಹೆಚ್ಚು ಗೌರವವಿದೆ. ಪುರಾಣಗಳ ಪ್ರಕಾರ 16000 ಸರ್ಪಸಂಕುಲಗಳಿವೆ. ನಾಗಾರಾಧನೆಯ ಹೆಸರಿನಲ್ಲಿ ಪ್ರಕೃತಿಯ ಉಳಿವಿದೆ. ಪ್ರಕೃತಿಯ ಆರಾಧನೆಯಿಂದ ಆರೋಗ್ಯದ ಹಿತವಿದೆ. ಪ್ರಕೃತಿಯಲ್ಲಿ ಪರಮಾತ್ಮನ ಅಸ್ತಿತ್ವವನ್ನು ಕಾಣಬಹುದು. ಸಹೋದರತ್ವವನ್ನು ಪ್ರತಿನಿಧಿಸುವ ನಾಗರಪಂಚಮಿ ಹಬ್ಬ ನಾಡಿಗೆ ವಿಶೇಷ ಹಬ್ಬವಾಗಿದೆ” ಎಂದು…