ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮಂಗಳೂರು ನಗರ ಸಮಿತಿ ಪಂಚ ಕಾರ್ಯಕ್ರಮಗಳಿಗೆ ಚಾಲನೆ

ಮಂಗಳೂರು, ಜ. 16: “ಪರೋಪಕಾರದ ಗುಣವನ್ನು ರೂಢಿಸಿಕೊಂಡು ಸೇವಾಕಾರ್ಐದಲ್ಲಿ ತೊಡಗಿಸಿಕೊಂಡಾಗ ಬದುಕು ಸಾರ್ಥಕ್ಯವನ್ನು ಪಡೆಯುತ್ತದೆ. ತ್ಯಾಗ ಸೇವಯಲ್ಲಿ ಬದುಕಿನ ಶಾಶ್ವತ ಸುಖ ಅಡಗಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ನಗರದ ಪುರಭವನದಲ್ಲಿ ಜರಗಿದ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ, ಮಂಗಳೂರು ನಗರ ಸಮಿತಿಯ ಪಂಚ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಶೀರ್ವಚನಗೈದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಶ್ರೀರಾಮ ತಾರಕ ಮಂತ್ರ ಹಾಗೂ ಹನುಮಾನ್ ಚಾಲೀಸಾ ಪಠಣ ನೆರವೇರಿಸಿದರು. ಶಾಸಕ ಶ್ರೀ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಸಂಯೋಜಕ ಕಜಂಪಾಡಿ ಶ್ರೀ ಸುಬ್ರಹ್ಮಣ್ಯ ಭಟ್ ಅವರು ‘ಕುಟುಂಬದ ಮೌಲ್ಯಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ಶ್ರೀ ನಾರಾಯಣ ಶೆಟ್ಟಿ ದಂಬೆಲ್, ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ ಮುಳಿಹಿತ್ಲು ಅವರಿಗೆ ‘ಗುರುಶರಣ’ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. 

ಸಮಿತಿ ಕಾರ್ಯಾಧ್ಯಕ್ಷ ಶ್ರೀ ಜಿತೇಂದ್ರ ಕೊಟ್ಟಾರಿ ಸ್ವಾಗತಿಸಿದರು. ಅಧ್ಯಕ್ಷ ಶ್ರೀ ಪುಷ್ಪರಾಜ್ ಜೈನ್ ಪ್ರಸ್ತಾವನೆಗೈದರು. ಸಮಿತಿಯ ಸಂಚಾಲಕ ಶ್ರೀ ನಾಗರಾಜ ಆಚಾರ್ಯ ಪಂಚ ಕಾರ್ಯಕ್ರಮಗಳ ಸ್ವರೂಪದ ಬಗ್ಗೆ ವಿವರಿಸಿದರು. ಪಂಚ ಕಾರ್ಯಕ್ರಮಗಳಾದ ಭಜನೆಯ ಬಗ್ಗೆ ಶ್ರೀ ಸೀತಾರಾಮ್, ಹರಿಕಥೆ ಬಗ್ಗೆ ಶ್ರೀ ಮಹಾಬಲ ಶೆಟ್ಟಿ ಕೂಡ್ಲು, ಸಂಸ್ಕಾರದ ಬಗ್ಗೆ ಶ್ರೀ ಚಂದ್ರಶೇಖರ ಶೆಟ್ಟಿ, ಯೋಗದ ಬಗ್ಗೆ ಶ್ರೀ ಜಗದೀಶ್ ಶೆಟ್ಟಿ ಬಿಜೈ, ನಾಟಕದ ಬಗ್ಗೆ ಶ್ರೀ ಜೀವನ್ ಉಳ್ಳಾಲ್ ವಿವರಿಸಿದರು.

ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರುಪಿಸಿದರು. ಕಾರ್ಯಾಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ, ಮಂಗಳೂರು ಸಮಿತಿಯ ಸಂಚಾಲಕ ಶ್ರೀ ಪ್ರದೀಪ್ ಆಳ್ವ, ಪ್ರಧಾನ ಕಾರ್ಯದರ್ಶಿ ಶ್ರೀ ತಾರಾನಾಥ ಶೆಟ್ಟ ಬೋಳಾರ, ಕೋಶಾಧಿಕಾರಿ ಶ್ರೀ ದಿನೇಶ್ ಎಂ.ಪಿ. ಉಪಸ್ಥಿತರಿದ್ದರು. ಶ್ರೀ ದೇವಿ ಭಜನ ಮಂಡಳಿ, ಮೂಡುಶೆಡ್ಡೆ ಅವರಿಂದ ನೃತ್ಯ ಭಜನೆ ಹಾಗೂ ಡಾ. ಎಸ್.ಪಿ. ಗುರುದಾಸದ ಅವರಿಂದ ಹರಿಕಥಾ ಸತ್ಸಂಗ ಜರಗಿತು. ತುಳುನಾಡ ತುಡರ್ ಕಲಾವಿದರಿಂದ ‘ಮಾರಿಯಮ್ಮ’ ಎಂಬ ತುಳು ಜಾನಪದ ನಾಟಕ ಪ್ರದರ್ಶನಗೊಂಡಿತು.