Category societal

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಧನ್ವಂತರೀ ಜಯಂತಿ

ಅ.22: “ಆಯುಷ್ಯ, ಆರೋಗ್ಯ, ಯಶಸ್ಸು ಕರುಣಿಸುವವನೇ ಧನ್ವಂತರೀ. ಜಲೂಕವನ್ನು ಧರಿಸಿ ಅವತರಿಸಿದ ಧನ್ವಂತರೀ ದೇವರನ್ನು ಕಂಡಾಗ ಎಲ್ಲ ಗಿಡಗಳಲ್ಲಿಯೂ ಔಷಧೀಯ ಗುಣವಿದೆ ಎಂಬುದನ್ನು ತಿಳಿಯಬಹುದು. ನಾವು ಸೇವಿಸುವ ಆಹಾರವೇ ಔಷಧಿಯಾಗಬೇಕು. ವಾರಕ್ಕೊಂದು ಉಪವಾಸ ಮಾಡಲು ದಾಸರು ತಿಳಿಸಿದ್ದಾರೆ. ಇದರ ಉದ್ದೇಶವೇ ಆರೋಗ್ಯವನ್ನು ಕಾಪಿಡುವುದಾಗಿದೆ. ಧನ್ವಂತರೀ ಜಯಂತಿಯ ಆಚರಣೆ ಸಂಸ್ಕೃತಿಯನ್ನು ಉಳಿಸುವುದಾಗಿದೆ. ಸಂಸ್ಕೃತಿಯನ್ನು ಬೆಳೆಸಬೇಕಾದರೆ ಸಂಸ್ಕಾರ ಅಗತ್ಯ.…

ಕೆಸರ್‍ದ ಕಂಡೊಡೊಂಜಿ ದಿನ

“ಯುವಸಮೂಹ ಕೃಷಿ ಸಂಸ್ಕೃತಿಗೆ ಮನಮಾಡಬೇಕು” ಶ್ರೀ ಸಂಸ್ಥಾನದ ಸಾಗುವಳಿ ಭೂಮಿಯಲ್ಲಿ ‘ಕೆಸರ್‍ದ ಕಂಡೊಡೊಂಜಿ ದಿನ’ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಜು. 3: “ಮಣ್ಣು ಸಂಸ್ಕೃತಿಯ ಒಂದು ಭಾಗ. ಪ್ರಕೃತಿಯ ಆರಾಧನೆ, ಸಂರಕ್ಷಣೆ ಎಲ್ಲರಿಂದಲೂ ಆಗಬೇಕು. ಧರ್ಮ ಸಂರಕ್ಷಣೆಯ ವಿಚಾರದಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿದೆ. ಯುವ ಸಮೂಹ ಇಂತಹ ಚಟುವಟಿಕೆಗಳಿಗೆ ಮನಮಾಡಿ ತೊಡಗಿಸಿಕೊಳ್ಳುವಂತಾಗಬೇಕು” ಎಂದು ಪರಮಪೂಜ್ಯ…

ಧೈರ್ಯದಿಂದ ಮುನ್ನಡೆದರೆ ಯಶಸ್ಸು ಖಂಡಿತ

“ಧೈರ್ಯದಿಂದ ಮುನ್ನಡೆದರೆ ಯಶಸ್ಸು ಖಂಡಿತ” ಜಿಲ್ಲಾ ಮಟ್ಟದ ಒಳಾಂಗಣ ಮತ್ತು ಹೊರಾಂಗಣ ಸ್ಪರ್ಧೆಗಳನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಜು. 30: “ಸಮಾಜದಲ್ಲಿ ಮನುಷ್ಯ ಶಾಂತಿ, ನೆಮ್ಮದಿಗೆ ಬಯಸುವ ಕಾಲ ಬಂದಿದೆ. ಅಂತರಂಗದ ಬಾಗಿಲು ತೆರೆಯಬೇಕು. ಅಲ್ಲಿ ಆನಂದದ ಸೆಲೆ ಇರುತ್ತದೆ. ಸ್ಪರ್ಧೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೆ. ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ನಡೆಯಬೇಕು. ಧೈರ್ಯದಿಂದ ಮುನ್ನಡೆದರೆ…

ಯುವ ಸಮುದಾಯ ಜಾಗ್ರತರಾದಾಗ ದೇಶ ಸದೃಢ

“ಯುವ ಸಮುದಾಯ ಜಾಗ್ರತರಾದಾಗ ದೇಶ ಸದೃಢ” ಒಡಿಯೂರು ಶ್ರೀಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬಯಿ ಘಟಕದ 21ನೇ ವಾರ್ಷಿಕೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಮುಂಬಯಿ, ಜು.24: “ಸುಖ ದುಃಖಗಳನ್ನು ಸಮತೋಲನದಲ್ಲಿಡಲು ಆಧ್ಯಾತ್ಮಿಕತೆ ಬೇಕು. ಸುಖವೆಂದರೆ ಮನಸ್ಸಿನ ಒಂದು ಸ್ಥಿತಿಯಾಗಿದೆ. ಮನಸ್ಸನ್ನು ಏಕಾಗ್ರತೆಯಲ್ಲಿಟ್ಟು ಆಧ್ಯಾತ್ಮಿಕದ ವಿಚಾರಧಾರೆಗಳನ್ನು ನಮ್ಮಲ್ಲಿ ಇರಿಸಿಕೊಂಡಾಗ ಧರ್ಮದ ಕಡೆಗೆ…

ಗ್ರಾಮೋತ್ಸವ 2022

“ಅರಿವಿನೊಂದಿಗೆ ಮಾಡುವ ಸೇವೆ ಭಗವಂತನಿಗೆ ಪ್ರಿಯ” ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವ – ಗುರುವಂದನ ನೂತನ ಶ್ರೀ ಮಾತಾ ಅನ್ನಛತ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಸಂದೇಶ ಆ. 8: “ಅರಿತು ಮಾಡಿದ ಸೇವೆ ಅರ್ಥಪೂರ್ಣವಾಗಿರುತ್ತದೆ. ಅಹಂಕಾರ, ಮಮಕಾರವಿಲ್ಲದ ಸೇವೆ ಭಗವಂತನಿಗೆ ಸಲ್ಲುತ್ತದೆ. ಜ್ಞಾನಪೂರ್ಣತೆಯಿಂದ ಸಂಪತ್ತನ್ನು ಸದ್ವಿನಿಯೋಗಿಸಿದಾಗ ಅದಕ್ಕೆ ಮೌಲ್ಯ ತುಂಬುತ್ತದೆ. ತ್ಯಾಗ ತುಂಬಿದ…

ಶ್ರೀ ಒಡಿಯೂರು ಗ್ರಾಮೋತ್ಸವ ಸಮಿತಿಯ ಪ್ರಕಟಣೆ

ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವ 2022ರ ಪ್ರಯುಕ್ತ ಒದಗಿಸುವ ಕೃತಕ ಕಾಲು ಮತ್ತು ಕೈ ಹಾಗೂ ಗಾಲಿಕುರ್ಚಿಯ ಅವಶ್ಯಕತೆಯ ಫಲಾನುಭವಿಗಳು ತಮ್ಮ ಆಧಾರ್‍ಕಾರ್ಡ್‍ನ ಪ್ರತಿ, ಮೊಬೈಲ್ ನಂಬ್ರ, ಭಾವಚಿತ್ರದೊಂದಿಗೆ ಜೂನ್ 30ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವ ಸಮಿತಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ಅಂಚೆ:…

ವಿಶ್ವ ಪರಿಸರ ದಿನಾಚರಣೆ

“ಪರಿಸರ ಕೊಡುವ ಪಾಠದಲ್ಲಿ ನಮ್ಮ ಬದುಕಿಗೂ ಪಾಠವಿದೆ” – ಒಡಿಯೂರು ಶ್ರೀ ಸಂಸ್ಥಾನದಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಂದೇಶ ನೀಡಿದ ಒಡಿಯೂರು ಶ್ರೀ “ಪರಿಸರ ಸುಂದರವಾಗಿರಬೇಕಾದರೆ ಸ್ವಚ್ಛತೆ ಅತ್ಯಗತ್ಯ. ಪರಿಸರ ಸ್ವಚ್ಛವಾದರೆ ನಾವೂ ಸ್ವಚ್ಛವಿದ್ದೇವೆ ಎಂದರ್ಥ. ಪರಿಸರ ಸ್ವಚ್ಛತೆಯ ಕಾರ್ಯ ನಮ್ಮ ಮನಸ್ಸಿನಲ್ಲಿ ಮೂಡಬೇಕು; ಈ ಬಗ್ಗೆ ದೃಢ ಸಂಕಲ್ಪ ಮಾಡಬೇಕು. ಆಗ ಮಾತ್ರ ಭಾರತ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ‘ಒಡಿಯೂರು ಶ್ರೀ ಜನ್ಮದಿನೋತ್ಸವ – ಗ್ರಾಮೋತ್ಸವ’ದ ಪೂರ್ವಭಾವಿ ಸಭೆ

“ಗ್ರಾಮೋತ್ಸವದಿಂದ ರಾಷ್ಟ್ರೋತ್ಥಾನ” – ಒಡಿಯೂರು ಶ್ರೀ “ಸಮಾಜಮುಖಿ ಕಾರ್ಯಗಳು ಗ್ರಾಮೋತ್ಸವದ ಮೂಲಕ ಆಗಬೇಕಾಗಿದೆ. ಗ್ರಾಮೋತ್ಸವದ ಮೂಲಕ ರಾಷ್ಟ್ರೋತ್ಥಾನದ ಕಾರ್ಯವಾಗಲಿ. ಬದುಕು ಕೌಶಾಲ್ಯಾಧಾರಿತವಾಗಿರಬೇಕು. ಗುಣಾತ್ಮಕ ಹಾಗೂ ಋಣಾತ್ಮಕ ಪಟ್ಟಿ ಜೀವನದಲ್ಲಿ ಮಾಡಬೇಕು. ಜೀವನದಲ್ಲಿ ಬದಲಾವಣೆ ಅತೀ ಅಗತ್ಯ. ವಿಶ್ವದಲ್ಲಿ ಶಾಶ್ವತವಾದುದು ಯಾವುದೂ ಇಲ್ಲ. ಎಲ್ಲರನ್ನು ಅರಿತು ಬಾಳುವ ಬದುಕು ನಮ್ಮದಾಗಬೇಕು. ಆಧ್ಯಾತ್ಮದ ಬದುಕಿಗೆ ನಮ್ಮನ್ನು ತೊಡಗಿಸಿಕೊಳ್ಳುವ ಮನಮಾಡಬೇಕು.…

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ

|| ಜೈ ಗುರುದೇವ್ || “ಪರೋಕಾರ ಮನೋಭಾವದ ಜೊತೆ ಮಾನವೀಯ ಮೌಲ್ಯ ಬೆಳೆಸಿಕೊಂಡಾಗ ಸುಸಂಸ್ಕøತ ಸಮಾಜ ನಿರ್ಮಾಣ” ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ “ಆತ್ಮವಿಶ್ವಾಸ ವೃದ್ಧಿಸಿಕೊಂಡು ಗ್ರಾಮದ ಜನರ ಭೇಟಿ, ಗುಂಪುಗಳ ರಚನೆ ಎಲ್ಲವನ್ನೂ ಪ್ರೀತಿಯಿಂದ ಮಾಡಿದಾಗ ಯಶಸ್ಸು. ಶಿಸ್ತು-ಸಂಯಮ, ಪರೋಪಕಾರದ ಮನೋಭಾವದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸುಸಂಸ್ಕøತ…