ಪೂಜ್ಯ ಸ್ವಾಮೀಜಿಯವರು ಪ್ರತಿ ವರ್ಷ ಎರಡು ಬಾರಿ ತೀರ್ಥ ಕ್ಷೇತ್ರ ಸಂಚಾರವನ್ನು ಶಿಷ್ಯವರ್ಗದವರೊಂದಿಗೆ ಕೈಗೊಳ್ಳುವರು. ಶ್ರೀ ಗುರುದೇವ ಸೇವಾ ಬಳಗದ ಸದಸ್ಯರು ಪೂಜ್ಯಶ್ರೀಗಳೊಂದಿಗೆ ತೀರ್ಥಾಟನೆಗೆ ಹೋಗುತ್ತಾರೆ.
ಸಾಧು-ಸಂತರ, ಋಷಿಮುನಿಗಳ, ಯತಿವರ್ಯರ ಪುಣ್ಯ ಪಾದಸ್ಪರ್ಶದಿಂದ ತೀರ್ಥಗಳು ಪುನೀತವಾಗುತ್ತವೆಯಂತೆ. ಪೂಜ್ಯಶ್ರೀಗಳು ಹೇಳುವಂತೆ ‘ಲೋಕಸಂಚಾರ, ತೀರ್ಥಕ್ಷೇತ್ರ ಸಂಚಾರದಿಂದ ಅನುಭವ ಪಕ್ವವಾಗುತ್ತದೆ. ಸ್ವಾನುಭವದಿಂದ ಗಳಿಸಿದ ಜ್ಞಾನವೇ ಸುಜ್ಞಾನ’.