“ಬದುಕಿನ ವಿಕಾಸಕ್ಕೆ, ಜೀವನದ ಸರ್ವತೋಮುಖ ಅಭಿವೃದ್ಧಿಗೆ ಸಂಘಗಳು ಸಹಕಾರಿ”

Displaying IMG-20250618-WA0065.jpg


ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಮಾಸಿಕ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ದಿವ್ಯ ಸಂದೇಶ
ಜೂನ್. ೧೫: “ಶ್ರದ್ಧೆ ಇದ್ದರೆ ಜ್ಞಾನ ಲಭಿಸುತ್ತದೆ. ಸಂಸ್ಕಾರವಿದ್ದರೆ ಬದುಕು ಹಸನಾಗಬಹುದು. ಅದರಲ್ಲೂ ಧರ್ಮಶ್ರದ್ಧೆ ಅಗತ್ಯವಾಗಿ ಬೇಕು. ಕಡಲಿನಲ್ಲಿ ತೆರೆ ಬಂದ ಹಾಗೆ ಸಮಾಜದಲ್ಲಿಯೂ ಅಲ್ಲೋಲಕಲ್ಲೋಲವಾಗುವುದನ್ನು ಕಾಣಬಹುದು. ಸಂಸ್ಕಾರದ ಕೊರತೆಯೇ ಇದಕ್ಕೆ ಮೂಲ ಕಾರಣ. ದೇಶದ ಒಳಗಿನವರಿಂದಲೇ ತೊಂದರೆಯಾಗುವುದನ್ನೂ ಕಾಣಬಹುದು. ಈ ಸಂದರ್ಭ ನಾವು ಜಾಗೃತರಾಗಬೇಕಾದ ಅವಶ್ಯಕತೆ ಇದೆ. ಕೃಷ್ಣ ದೇವರು ಆಕರ್ಷಣೆಯ ದೇವರು. ಕೇವಲ ಮನುಷ್ಯನನ್ನು ಮಾತ್ರವಲ್ಲ ಪ್ರಾಣಿ-ಪಕ್ಷಿಗಳನ್ನು ಆಕರ್ಷಿಸುವ ದೇವನಾಗಿದ್ದಾನೆ. ನಾವೆಲ್ಲರೂ ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿದದವರು. ಕೃಷ್ಣನಿಗೂ ಕೃಷಿಗೂ ನಿಕಟವಾದ ಸಂಬAಧವಿದೆ” ಎಂದು ಪೂಜ್ಯ ಸ್ವಾಮೀಜಿಯವರು ದಿವ್ಯ ಸಂದೇಶ ನೀಡಿದರು.
ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ ಸಂಸ್ಕಾರ’ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಮೂರು ತಾಲೂಕಿನ ಸಂಘಗಳಿಗೆ ಸುಮಾರು ೮,೦೫,೫೧೪/- ರೂಪಾಯಿಗಳ ಲಾಭಾಂಶದ ಚೆಕ್‌ನ್ನು ವಿತರಿಸಿದ ಪೂಜ್ಯ ಸ್ವಾಮೀಜಿಯವರು “ಭಾಷೆಯ ಹಿಂದೆ ಸಂಸ್ಕೃತಿ ಅಡಗಿದೆ. ಅನ್ಯಭಾಷೆಯನ್ನು ಕಲಿತರೂ ಮಾತೃಭಾಷೆಯನ್ನು ಮರೆಯಬಾರದು. ಒಳ್ಳೆಯ ವಿಚಾರಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿನ ವಿಕಾಸಕ್ಕೆ, ಜೀವನದ ಸರ್ವತೋಮುಖ ಅಭಿವೃದ್ಧಿಗೆ ಸಂಘಗಳು ಸಹಕಾರಿ. ದುಡ್ಡಿನ ಜೊತೆಗೆ ಬುದ್ಧಿಯೂ ಬೇಕು. ತಾಳ್ಮೆ – ಸಹನೆಯೂ ಸಂಘಟನೆಯಲ್ಲಿ ಅವಶ್ಯಕ” ಎಂದರು.
ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊAಡ ಕಾರ್ಯಕ್ರಮದಲ್ಲಿ ಕಾರ್ಕಳ ಉತ್ತರ ವಲಯ ಸಂಯೋಜಕಿ ಶ್ರೀಮತಿ ಸುಜಯ ಸಿ.ರಾವ್ ಸ್ವಾಗತಿಸಿದರು. ಉಡುಪಿ ವಲಯಾಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ ಕಬ್ಯಾಡಿ, ಪಿ.ಆರ್.ಒ. ಶ್ರೀ ಮಾತೇಶ್ ಭಂಡಾರಿ, ಹಿರ್ಗಾನ ಘಟಸಮಿತಿ ಅಧ್ಯಕ್ಷ ಶ್ರೀ ತಾರಾನಾಥ ಶೆಟ್ಟಿ, ಕಬ್ಯಾಡಿ ಘಟಸಮಿತಿ ಸದಸ್ಯ ಶ್ರೀ ಜಯರಾಮ ಶೆಟ್ಟಿಗಾರ್, ಉಡುಪಿ ಸಂಯೋಜಕಿ ಶ್ರೀಮತಿ ಚಂದ್ರಿಕಾ ಜಯಪ್ರಕಾಶ್ ದೀಪ ಪ್ರಜ್ವಲಿಸಿದರು.
ಧ್ಯಾನ, ಪ್ರಾಣಾಯಾಮ, ಭಗವದ್ಗೀತೆ ಪಠಣ, ಹನುಮಾನ್ ಚಾಲೀಸಾ ಪಠಣ ಮುಂತಾದ ಚಟುವಟಿಕೆಗಳು ಜರಗಿದವು. ಶ್ರೀಮತಿ ಮಾಯಾ ಕಾಮತ್ ಮತ್ತು ಬಳಗ ಮಣಿಪಾಲ ಇವರು ಭಜನೆಗೈದರು. ಸಂಯೋಜಕಿ ಶ್ರೀಮತಿ ದಿವ್ಯಶ್ರೀ ವಂದಿಸಿದರು.
ಎಲ್ಲಾ ಘಟಸಮಿತಿಯ ಪದಾಧಿಕಾರಿಗಳು, ಸದಸ್ಯರು ಪೂಜ್ಯ ಸ್ವಾಮೀಜಿಯವರಿಗೆ ಫಲಪುಷ್ಪ ಸಮರ್ಪಿಸಿ ಆಶೀರ್ವಾದ ಪಡೆದು ಫಲಮಂತ್ರಾಕ್ಷತೆ ಸ್ವೀಕರಿಸಿದರು.