ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.05-08-2019ನೇ ಸೋಮವಾರ ನಾಗರಪಂಚಮಿ ಮಹೋತ್ಸವ ಪ್ರಯುಕ್ತ ಸಾರ್ವಜನಿಕ ಆಶ್ಲೇಷಬಲಿ ಪೂಜೆ ನಡೆಯಲಿರುವುದು. ಬೆಳಿಗ್ಗೆ ಸ್ವಯಂಭೂ ನಾಗಸನ್ನಿಧಿಯಲ್ಲಿ ಅಭಿಷೇಕ, ಕಲ್ಪೋಕ್ತಪೂಜೆ ನಡೆಯಲಿದೆ. ಬಳಿಕ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ನಾಗರಪಂಚಮಿಯ ಸಂದೇಶ ನೀಡಲಿದ್ದಾರೆ. ಮಧ್ಯಾಹ್ನ ಆರಾಧ್ಯದೇವರಿಗೆ ಮಹಾಪೂಜೆ, ಮಹಾಸಂತರ್ಪಣೆ ನಡೆಯಲಿದೆ. ರಾತ್ರಿ ರಂಗಪೂಜೆ, ಮಹಾಪೂಜೆ ಜರಗಲಿದೆ.