ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.05-10-2019ನೇ ಶನಿವಾರ ಮೊದಲ್ಗೊಂಡು ತಾ.08-10-2019ರ ತನಕ ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಶಾರದಾ ಮಹೋತ್ಸವ ನಡೆಯಲಿರುವುದು. ಈ ಸುಸಂದರ್ಭ
ಶರದೃತು ಸಂಸ್ಕಾರ ಶಿಬಿರ:
ತಾ.05-10-2019ರಿಂದ 07-10-2019ರ ತನಕ 6ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಶಾಲಾ ಮಕ್ಕಳಿಗೆ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠವು ‘ಶರದೃತು ಸಂಸ್ಕಾರ ಶಬಿರ’ವನ್ನು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಆಯೋಜಿಸಿದೆ. ಈ ಶಿಬಿರದಲ್ಲಿ ಯೋಗ, ಧ್ಯಾನ, ರಂಗ ತರಬೇತಿ, ಪೇಪರ್ ಕ್ರಾಫ್ಟ್ ಮುಂತಾದ ತರಬೇತಿಗಳನ್ನು ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಈ ಶಿಬಿರದ ಸದುಪಯೋಗವನ್ನು ಪಡೆದಕೊಳ್ಳಬಹುದು.