ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವದ ಅಂಗವಾಗಿ ಹಮ್ಮಿಕೊಂಡ ಬಂಟ್ವಾಳ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕು.ರೂಪಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ ಪ್ರಥಮ ಬಹುಮಾನ, ಮಾ.ಶ್ರವಣ್ ಕುಮಾರ್ ಶ್ರೀಗುರುದೇವ ವಿದ್ಯಾಪೀಠ ಒಡಿಯೂರು ದ್ವಿತೀಯ ಬಹುಮಾನ ಮತ್ತು ಮಾ.ಸಚಿನ್ ಬಿ.ಜಿ ಸತ್ಯಸಾಯಿಲೋಕಸೇವಾಪ್ರೌಢಶಾಲೆ ಅಳಿಕೆ ಹಾಗೂ ಕು. ಅಮೃತವರ್ಷಿಣಿ ಸರಸ್ವತಿವಿದ್ಯಾಲಯ ಕನ್ಯಾನ ತೃತೀಯ ಬಹುಮಾನವನ್ನು ಪಡೆದಿರುತ್ತಾರೆ. ಪ್ರಬಂಧ ವಿಷಯವಾಗಿ ನಾನು ಮತ್ತು ಭಾರತ. ಬಹುಮಾನ ವಿಜೇತರಿಗೆ ದಿನಾಂಕ 29/07/2019 ರ ಗ್ರಾಮೋತ್ಸವದಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮೀಜಿಯವರು ಬಹುಮಾನವನ್ನು ವಿತರಿಸಲಿರುವರು.