+91 8255-266211
info@shreeodiyoor.org

ಕಾಡ್-ನಾಡ್-ಕಡಲ್

 

ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿ ಹಾಗೂ ಸಮ್ಮೇಳನಾಧ್ಯಕ್ಷ ಡಾ| ಕನರಾಡಿ ವಾದಿರಾಕ ಭಟ್ ಇವರ ಉಪಸ್ಥಿತಿಯಲ್ಲಿ ಕವಿಗೋಷ್ಠಿ ಕಾಡ್-ನಾಡ್-ಕಡಲ್ ಅಂದರೆ ಸ್ವರಚಿತ ಕವನಗಳ ವಾಚನ, ಸಂಗೀತ, ಚಿತ್ರ ಬಿಡಿಸುವ ಕಾರ್ಯಕ್ರಮ ಸಂಪನ್ನಗೊಂಡಿತು.

ಶ್ರೀಮತಿ ವಿಜಯಾ ಶೆಟ್ಟಿ ಸಾಲೆತ್ತೂರು, ಶ್ರೀ ಅಶೋಕ್ ಎನ್. ಕಡೇಶಿವಾಲಯ, ಶ್ರೀಮತಿ ವಿಜಯಲಕ್ಷ್ಮೀ ಕಟೀಲು ಸ್ವರಚಿತ ಕವನಗಳನ್ನು ವಾಚಿಸಿದರು. ಚಿತ್ರ ಕಲಾವಿದ ಶ್ರೀ ಮೋಹನ್‌ಕುಮಾರ್ ಪೆರ್ಮುದೆ ಅದಕ್ಕನುಗುಣವಾಗಿ ಚಿತ್ರ ಬಿಡಿಸಿದರು.
ಶ್ರೀಮತಿ ರೇಣುಕಾ ಎಸ್. ರೈ, ಶ್ರೀ ಸಂತೋಷ್ ಭಂಡಾರಿ, ಶ್ರೀ ಅವಿನಾಶ್ ಒಡಿಯೂರು ಕವಿಗಳ ಕವತೆಗಳನ್ನು ಹಾಡಿದರು. ಶ್ರೀಮತಿ ಸಾಯೀಶ್ವರೀ ಡಿ. ಶೆಟ್ಟಿ ಸಹಕರಿಸಿದರು.

ಒಡಿಯೂರು ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷ ಶ್ರೀ ಟಿ. ಸುಬ್ರಹ್ಮಣ್ಯ ಸ್ವಾಗತಿಸಿದರು. ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪುತ್ತೂರು ತಾಲೂಕು ವಿಸ್ತರಣಾಧಿಕಾರಿ ಶ್ರೀ ಸುರೇಶ್ ಶೆಟ್ಟಿ ಮೊಗರೊಡಿ ವಂದಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top