ಓಣಂ ಹಬ್ಬ ಆಚರಣೆ
Date : Monday, 04-09-2017
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರಿನಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು.
Date : Monday, 04-09-2017
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರಿನಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು.
Date : Monday, 10-04-2017
ಶ್ರೀ ಸಂಸ್ಥಾನದ ಪ್ರತಿಷ್ಠಾ ಮುಹೂರ್ತವನ್ನು ಪ್ರತಿವರ್ಷ ವಾರ್ಷಿಕೋತ್ಸವಾಗಿ ಆಚರಿಸಲಾಗುತ್ತಿದ್ದು, 2001ರಿಂದ ಒಡಿಯೂರು ರಥೋತ್ಸವವಾಗಿದೆ. ಒಡಿಯೂರು ರಥೋತ್ಸವ 2014 ರಿಂದ ತುಳುನಾಡ ಜಾತ್ರೆಯಾಗಿ ಸಂಭ್ರಮದ ಪರ್ವ ವಾಗಿದೆ. ಇದೊಂದು ಕಣ್ಣಿಗೆ ಹಬ್ಬವಾಗಿ ಈ ನಾಡಿನ ಅಪೂರ್ವ ಉತ್ಸವವಾಗಿ ದಾಖಲಾಗಿದೆ. ಸುಮಾರು 12 ಕಿ.ಮೀ. ಕ್ರಮಿಸುವ ಶ್ರೀ ದತ್ತಗುರು, ಪ್ರಾಣದೇವರ ಒಡಿಯೂರು ರಥೋತ್ಸವ ಜನಮನವನ್ನು ಆಕರ್ಷಿಸುವ ಹಬ್ಬವಾಗಿದೆ. ನವರತ್ನಖಚಿತವಾದ ಶ್ರೀ ದತ್ತಗುರು ಸ್ವರ್ಣಪಾದುಕೆಗಳನ್ನು ಮತ್ತು ಅಭಯ ಹಸ್ತದ ಭವ್ಯವಾದ ಪ್ರಾಣದೇವರ ಉತ್ಸವಮೂರ್ತಿಯನ್ನು ವೇದಘೋಷ, ಪಂಚ ವಾದ್ಯಗಳ ನಿನಾದದೊಂದಿಗೆ ರಥದಲ್ಲಿ ರಿಸಲಾಗುತ್ತದೆ. […]
Date : Monday, 10-04-2017
ಶ್ರೀ ಸಂಸ್ಥಾನದ ದಶಮಾನೋತ್ಸವ ಸಂದರ್ಭದಲ್ಲಿ ನಾಡಿನ ಹತ್ತು ಮಂದಿ ಯತಿಗಳನ್ನು ಸಂಸ್ಥಾನಕ್ಕೆ ಗೌರವದಿಂದ ಆಹ್ವಾನಿಸಿ, ಸಾಧು-ಸಮಾವೇಶ ನಡೆಸಿ ಅವರಿಂದ ಧರ್ಮ ಸಂದೇಶವನ್ನು ದಾಖಲಿಸಲಾಯಿತು. ಅವರೆಲ್ಲರ ವಚನಾಮೃತ ಸವಿಯುವ ಸಂದರ್ಭ ದೊರೆಯುವಂತಾದುದು ಒಂದು ಅಪೂರ್ವ ಭಾಗ್ಯ.
Date : Monday, 10-04-2017
ಶ್ರೀ ಸಂಸ್ಥಾನದಲ್ಲಿ ಸಾಂಸ್ಕೃತಿಕ ಸಂಘಟನೆಯಾದ ಜೈ ಗುರುದೇವ ಕಲಾಕೇಂದ್ರ ಯಕ್ಷಗಾನ, ನಾಟಕ, ನೃತ್ಯ ಮತ್ತು ಸಂಗೀತದಲ್ಲಿ ಯುವಪ್ರತಿಭೆಗಳಿಗೆ ತರಬೇತಿ ನೀಡುತ್ತಿದೆ. ಯಕ್ಷಗಾನ ಹವ್ಯಾಸಿ ತಂಡವು ಪರಿಣಿತ ತರಬೇತುದಾರರಿಂದ ಶಿಕ್ಷಣ ಪಡೆದು ಶ್ರೀ ಸಂಸ್ಥಾನದಲ್ಲಿ ಮತ್ತು ಬೇರೆ ಕಡೆ ಸಂಘಟಕರ ಅಪೇಕ್ಷೆಯಂತೆ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಿದೆ. ಶ್ರೀ ಸಂಸ್ಥಾನದಲ್ಲಿ ಮಹಿಳಾ ಯಕ್ಷಗಾನ ತಂಡ, ಮಹಿಳಾ ನಾಟಕ ತಂಡ ಕ್ರೀಯಾಶೀಲವಾಗಿದೆ.
Date : Sunday, 09-04-2017
ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನ ಒಂದು ವಿಶಿಷ್ಟ ಸಾಂಸ್ಕೃತಿಕ ಕೇಂದ್ರವಾಗಿ ಜ್ಞಾನಸತ್ರದ ಪುಣ್ಯ ನೆಲೆಯಾಗಿ ಗುರುತತ್ವದ ಪ್ರಚಾರದ ದತ್ತಪೀಠವಾಗಿ, ಕಲೆ, ಸಾಹಿತ್ಯ ಸಂಸ್ಕೃತಿ , ಸಂಗೀತದ ಆಸರೆಯಾಗಿ, ತುಳು ಭಾಷಾಭಿಮಾನ ಬೆಳೆಸುವ ದೇಗುಲವಾಗಿ ಬೃಹದೆತ್ತರಕ್ಕೆ ವ್ಯಾಪಿಸಿದೆ. ಶ್ರೀ ಸಂಸ್ಥಾನದಲ್ಲಿ ಭಗವತ್ ಆರಾಧನೆಯಂತೆಯೇ ಕಲಾರಾಧನೆಗೂ ಪ್ರಾಮುಖ್ಯ ನೀಡಲಾಗಿದೆ. ಇಲ್ಲಿ ನಿರ್ಮಾಣಗೊಂಡಿರುವ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಶ್ರೀ ಸಂಸ್ಥಾನದಲ್ಲಿ ನಡೆಯುವ ವಿಶೇಷ ಉತ್ಸವಗಳು, ಧಾರ್ಮಿಕ ಸಭೆ-ಸಮಾರಂಭಗಳು, ಕಲೆ-ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತದೆ. ಸತ್ಸಂಗ, ವಿಚಾರ ಗೋಷ್ಠಿಗಳು, ಯಕ್ಷಗಾನ, ಸಂಗೀತ, […]
‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’