+91 8255-266211
info@shreeodiyoor.org

ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ, ಪುತ್ತೂರು ಘಟಕದ ಕಛೇರಿ ಉದ್ಘಾಟನೆ ಮತ್ತು ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಒಡಿಯೂರು ಶ್ರೀ ಆಶೀರ್ವಚನ

“ಷಷ್ಟಬ್ದ ಸಂಭ್ರಮ ರಾಷ್ಟ್ರೋತ್ಥಾನಕ್ಕೆ ಮುನ್ನುಡಿಯಾಗಲಿ, ಸಂಸ್ಕøತಿಯ ವಾಹಿನಿಯಾಗಲಿ” –ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ, ಪುತ್ತೂರು ಘಟಕದ ಕಛೇರಿ ಉದ್ಘಾಟನೆ ಮತ್ತು ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಒಡಿಯೂರು ಶ್ರೀ ಆಶೀರ್ವಚನ ಪುತ್ತೂರು, ಜ.22: “ಜನಸೇವೆ, ಸಮಾಜಮುಖಿ ಚಟುವಟಿಕೆ ಹಮ್ಮಿಕೊಳ್ಳುವುದೇ ಷಷ್ಠ್ಯಬ್ದದ ಮೂಲ ಉದ್ದೇಶ. ಹಾಗಾಗಿ ಇದು ರಾಷ್ಟ್ರೋತ್ಥಾನಕ್ಕೆ ಮುನ್ನುಡಿಯಾಗುವ, ಸಂಸ್ಕøತಿಯನ್ನು ಪಸರಿಸುವ ವಾಹಿನಿಯಾಗಲಿ ಅನ್ನುವುದೇ ಅಪೇಕ್ಷೆ. ದುಶ್ಚಟಮುಕ್ತ, ಸುಸಂಸ್ಕøತ ಸಮಾಜ ನಿರ್ಮಾಣದೊಂದಿಗೆ ಧರ್ಮ-ಸಂಸ್ಕøತಿಯ ಕುರಿತು ಎಚ್ಚರಿಸುವ ಕಾರ್ಯಕ್ರಮವಾಗಿ ಷಷ್ಠ್ಯಬ್ದ ಸಂಭ್ರಮ ಮೂಡಿಬರಲಿ. ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ಆದ್ಯತೆ […]

Read More

ಇದ್ದುದರಲ್ಲಿ ತೃಪ್ತಿ ಇರಲಿ; ಸಂತೃಪ್ತಿಯೇ ಸಂಪತ್ತು –ಒಡಿಯೂರು ಶ್ರೀ

“ಜ್ಞಾನ ಇಲ್ಲದ ಬದುಕು ಬದುಕಲ್ಲ. ಸಮಸ್ಯೆ ಬಂದರೆ ಅನುಭವ ಬರುತ್ತದೆ. ಅನುಭವದಿಂದ ನಮಗೆ ಜ್ಞಾನ ಲಭಿಸುತ್ತದೆ. ಲೌಕಿಕ ಜ್ಞಾನದ ಜೊತೆಗೆ ಅಲೌಕಿಕ ಜ್ಞಾನವೂ ನಮಗೆ ಅವಶ್ಯಕ. ಅದನ್ನೇ ಕಠೋಪನಿಷತ್ತಿನಲ್ಲಿ ಪರಾ ವಿದ್ಯೆ ಮತ್ತು ಅಪರಾ ವಿದ್ಯೆ ಎಂಬುದಾಗಿ ವಿಂಗಡಿಸಿ ತಿಳಿಸಿದ್ದಾರೆ. ಅಪರಾ ವಿದ್ಯೆಯೇ ಅಲೌಕಿಕ ವಿದ್ಯೆ. ಅರ್ಥಾತ್ ಅಧ್ಯಾತ್ಮ ವಿದ್ಯೆ. ಆ ಮೂಲಕ ನಾವು ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ […]

Read More

ಒಡಿಯೂರು ಶ್ರೀಗಳ ಷಷ್ಠ್ಯಬ್ದಿ ಸಂಭ್ರಮ ನಮ್ಮ ಕುಡ್ಲ ಟಿವಿ ವಾಹಿನಿಯಿಂದ ‘ಗುರುದೇವಾಮೃತ’ 60 ಜ್ಞಾನವಾಹಿನಿ ಪ್ರಸಾರ ಚಿತ್ರೀಕರಣಕ್ಕೆ ಚಾಲನೆ

ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ 60ರ ಸಂಭ್ರಮದ ಅಂಗವಾಗಿ ನಮ್ಮ ಕುಡ್ಲ ಟಿ.ವಿ. ವಾಹಿನಿ ನಿರಂತರ 60 ದಿನಗಳ ‘ಗುರುದೇವಾಮೃತ’ ಜ್ಞಾನವಾಹಿನಿ ಆಧ್ಯಾತ್ಮಿಕ ಚಿಂತನಾಸತ್ರ ಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಿದ್ದು ಅದರ ಚಿತ್ರೀಕರಣಕ್ಕೆ ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಪೂಜ್ಯ ಶ್ರೀಗಳವರು ದೀಪ ಪ್ರಜ್ವಲನಗೊಳಿಸಿ ಚಾಲನೆ ನೀಡಿದರು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀಗಳ ಷಷ್ಠ್ಯಬ್ದಿ ಸಂಭ್ರಮ ಸಮಿತಿಯ ಅಧ್ಯಕ್ಷ ಮೂಡುಬಿದ್ರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್‍ನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಕಾರ್ಯಾಧ್ಯಕ್ಷ ಮಾಜಿ […]

Read More

ಒಡಿಯೂರು ಶ್ರೀಗಳವರ ಷಷ್ಠ್ಯಬ್ದಿ ಸಂಭ್ರಮ ಸಮಿತಿಯ ಅಧ್ಯಕ್ಷರಾಗಿ ಡಾ. ಎಂ. ಮೋಹನ ಆಳ್ವ ಆಯ್ಕೆ “ಕಾರ್ಯಕ್ರಮ ಸಮಾಜಮುಖಿ ಚಿಂತನೆಗಳಿಂದ ಕೂಡಿರಬೇಕು” – ಷಷ್ಟ್ಯಬ್ದಿ ಆಚರಣೆಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ

ಸೆ.18: “ತ್ಯಾಗಪೂರ್ಣ ಸೇವೆಯಿಂದ ಅರ್ಥಪೂರ್ಣ ಕಾರ್ಯಕ್ರಮ ಮಾಡಲು ಸಾಧ್ಯ. ಕಳೆದು ಹೋದುದರ ಬಗ್ಗೆ ಚಿಂತಿಸದೆ ಇದ್ದುದರಲ್ಲೇ ತೃಪ್ತಿಪಡುವ ಮನಸ್ಸು ನಮ್ಮದಾಗಬೇಕು. ಯಾವುದೇ ಕಾರ್ಯಕ್ರಮವೂ ಸಹ ಅದು ಸಮಾಜಮುಖಿಯಾಗಿರಬೇಕು. ಮಾತ್ರವಲ್ಲದೆ ಅದೊಂದು ನೆನಪಿನ ಬುತ್ತಿಯಾಗಿರಬೇಕು. ಶಿಸ್ತುಬದ್ಧವಾಗಿ ನಡೆದ ಕಾರ್ಯಕ್ರಮಗಳು ಯಶಸ್ಸನ್ನು ಕಾಣುತ್ತದೆ. ಈ ಷಷ್ಠ್ಯಬ್ದಿ ಕಾರ್ಯಕ್ರಮ ಹಲವಾರು ಸಮಾಜಮುಖಿ ಚಿಂತನೆಗಳಿಂದ ಕೂಡಿದೆ. ಕೇಂದ್ರ ಸಮಿತಿಯ ರಚನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕುಗಳಲ್ಲಿ ಹಾಗೂ ಗ್ರಾಮ ಗ್ರಾಮಗಳಲ್ಲಿ ಸಮಿತಿಯನ್ನು ರಚನೆ ಮಾಡುವ ಯೋಜನೆ ಇದೆ. ಆದರ್ಶ ಹಾಗೂ ಅರ್ಥಪೂರ್ಣ ಕಾರ್ಯಕ್ರಮದ […]

Read More

ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆ, ನಿಷ್ಠೆಗೆ ಮತ್ತೊಂದು ಹೆಸರು ಜನಾರ್ದನ ಮಾಸ್ಟರ್ – ಒಡಿಯೂರು ಶ್ರೀ

“ಸಂಪತ್ತು, ಮಿತ್ರರು, ಮನೆ–ಮಠ ಎಲ್ಲವೂ ಪುನರ್ ಲಭ್ಯವಾಗುವುದು. ಆದರೆ ಶರೀರವನ್ನು ನಾವು ಮತ್ತೆ ಪಡೆಯಲಾಗದು. ಭಗವಂತ ಕರುಣಿಸಿದ ಬುದ್ಧಿ, ವಿವೇಕ, ಜ್ಞಾನವನ್ನು ಸದುಪಯೋಗಪಡಿಸಿಕೊಂಡು ನಮ್ಮ ಜೀವನ ಪಯಣವನ್ನು ಸುಗಮವಾಗಿಸಿಕೊಳ್ಳಬೇಕು. ಅದನ್ನೇ ದಾಸರು ಹೇಳಿದಂತೆ ‘ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು ಸಾಧಾರಣವಲ್ಲ ಸಾಧು ಪ್ರಿಯನೇ…’ ಎನ್ನುವಂತೆ ನಮ್ಮ ಬದುಕು ಶ್ರೇಷ್ಠತೆಯನ್ನು ಪಡೆಯಬೇಕು. ಇದನ್ನೇ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಓರ್ವ ಆದರ್ಶ ಶಿಕ್ಷಕರಾಗಿ, ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಿದ್ದವರು ಆತ್ಮೀಯ ಶ್ರೀ ಜನಾರ್ದನ ಶೆಟ್ಟಿಯವರು. ಶಿಸ್ತು, ಸರಳ ಸಜ್ಜನಿಕೆ, ಪ್ರಾಮಾಣಿಕತೆ, ನಿಷ್ಠೆ, […]

Read More

ಶ್ರೀ ಕೆ. ಜನಾರ್ದನ ಶೆಟ್ಟಿ ಬಂಡಿತ್ತಡ್ಕ ಅವರ ನಿಧನಕ್ಕೆ ಒಡಿಯೂರು ಶ್ರೀಗಳ ಸಂತಾಪ

ಗಾಂಧೀಜಿ ಪ್ರಣೀತ ಬುನಾದಿ ಶಿಕ್ಷಣ ತರಬೇತಿ ಪಡೆದು ಶಿಕ್ಷಣವನ್ನೇ ಜೀವನವಾಗಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಅನನ್ಯ ಶಿಕ್ಷಕ ಶ್ರೀ ಕೆ. ಜನಾರ್ದನ ಶೆಟ್ಟಿ ಬಂಡಿತ್ತಡ್ಕ ಅವರ ನಿಧನಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ. ನಿವೃತ್ತಿಯ ಬಳಿಕ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ಸ್ಮರಣೀಯ. ಅಧ್ಯಾತ್ಮದ ಒಲವುಳ್ಳವರಾಗಿದ್ದ ಅವರು ಪ್ರಾಮಾಣಿಕತೆ, ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಂಡಿದ್ದರು. ಇವರು ಸಾಧ್ವಿ ಶ್ರೀ […]

Read More

ಒಡಿಯೂರು ಶ್ರೀಗಳ ಸಂತಾಪ

ಬಹು ಭಾಷಾ ಸ್ವರ ಸಾಮ್ರಾಟ, ಸಂಗೀತವನ್ನೇ ತನ್ನ ಉಸಿರಾಗಿಸಿಕೊಂಡ ಸಂಗೀತ ಸಾರ್ವಭೌಮ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಾದಲೀನರಾದುದು ಭಾರತದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೂಲತಃ ತೆಲುಗಿನವರಾದರೂ ಕನ್ನಡ ಭಾಷೆಯ ಬಗ್ಗೆ ಅವರಿಗಿದ್ದ ಪ್ರೀತಿ, ಅಭಿಮಾನ ಅಸಾಧಾರಣವಾದುದು. ಬೌತಿಕವಾಗಿ ಅವರು ಕಣ್ಮರೆಯಾದರೂ ಅವರ ಗಾನಮಾಧುರ್ಯ ಸದಾ ಹಸಿರಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಆರಾಧ್ಯಮೂರ್ತಿ ಶ್ರೀ ದತ್ತಾಂಜನೇಯ ದೇವರು ಕರುಣಿಸಲಿ […]

Read More

ಡಾ. ಶಿಮಂತೂರು ನಾರಾಯಣ ಶೆಟ್ಟರು ನಿಧನ : ಒಡಿಯೂರು ಶ್ರೀಗಳ ಸಂತಾಪ

ಜೀವನದ ಬಹುಪಾಲನ್ನು ಯಕ್ಷಗಾನದ ಛಂದಸ್ಸಿಗೆ ಮುಡಿಪಾಗಿರಿಸಿದ ಯಕ್ಷಗಾನ ಛಂದೋಬ್ರಹ್ಮ ಅದ್ಭುತ ಕವಿ, ಸಂಶೋಧಕ, ಸರಳ ಸಜ್ಜನಿಕೆಯ ಡಾ. ಶಿಮಂತೂರು ನಾರಾಯಣ ಶೆಟ್ಟರು ಶ್ರೀ ಸಂಸ್ಥಾನದ ಮುಖ್ಯ ಅಭಿಮಾನಿಗಳಲ್ಲೋರ್ವರು. ಇವರ ನಿಧನವು ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ. ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಆರಾಧ್ಯದೇವರು ಕರುಣಿಸಲೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಪ್ರಾರ್ಥಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಒಡಿಯೂರು ಶ್ರೀಗಳ ಸಂತಾಪ

ಮಡಿಯಾಳ ನಾರಾಯಣ ಭಟ್ಟರ ಬಳಿಕ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಆದುನಿಕ ಶೈಕ್ಷಣಿಕ ಕ್ರಾಂತಿಯ ಹರಿಕಾರ, ಅನುಪಮ ತ್ಯಾಗಜೀವಿ ಶ್ರೀ ಯು. ಗಂಗಾಧರ ಭಟ್ ಅವರ ನಿಧನಕ್ಕೆ ವಿಷಾಧಿಸಿ, ಅಗಲಿದ ದಿವ್ಯಾತ್ಮಕ್ಕೆ ಆರಾಧ್ಯದೇವರು ಚಿರಶಾಂತಿಯನ್ನು ಕರುಣಿಸಲೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಪ್ರಾರ್ಥಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಒಡಿಯೂರು ಶ್ರೀಗಳ ಸಂತಾಪ

ವಿಟ್ಲ ಅರಸರೆಂದೇ ಪ್ರಖ್ಯಾತರಾದ, ಒಡಿಯೂರು ಶ್ರೀ ಸಂಸ್ಥಾನದ ಮುಖ್ಯ ಅಭಿಮಾನಿಗಳೂ ಆದ ಶ್ರೀಯುತ ಜನಾರ್ದನ ವರ್ಮ ಅರಸರು ದೈವಾಧೀನರಾಗಿರುವುದು ಬೇಸರದ ಸಂಗತಿ. ಇವರ ಕಾಲಾವಧಿಯಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿರುವುದು ಅಲ್ಲದೆ ವಿಟ್ಲ ಸೀಮೆಯಲ್ಲಿ ಹಲವಾರು ದೇವಸ್ಥಾನಗಳು ಜೀರ್ಣೋದ್ಧಾರಗೊಂಡಿರುವುದು ಸ್ಮರಣೀಯ. ಸರಳ ವ್ಯಕ್ತಿತ್ವದ, ಮೃಧು ನಡೆ-ನುಡಿಯ, ಅರಸೊತ್ತಿಗೆಯನ್ನು ಕರ್ತವ್ಯವೆಂದು ಪಾಲಿಸಿಕೊಂಡು ಬಂದಿರುವುದು ಇವರ ವಿಶೇಷತೆ. ಅಗಲಿದ ಇವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಕುಟುಂಬಿಕರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಆರಾಧ್ಯದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top