+91 8255-266211
info@shreeodiyoor.org

“ಶಿಬಿರಗಳಿಂದ ಜೀವನ ಮೌಲ್ಯಗಳು ವರ್ಧಿಸುವುದು” – ಒಡಿಯೂರು ಶ್ರೀ

“ಅರಳುವ ಪ್ರತಿಭೆಗಳಿಗೆ ಶಿಬಿರಗಳು ವೇದಿಕೆಯಾಗಲಿ. ಕೌಶಲ್ಯದಿಂದ ಜೀವನ ರೂಪುಗೊಂಡಾಗ ಬದುಕೊಂದು ಕಲೆಯಾಗುವುದು. ಆಗಲೇ ಬದುಕಿಗೆ ಬೆಲೆ ಬರುವುದು. ಅರ್ಥಾತ್ ಜೀವನ ಮೌಲ್ಯಗಳು ವರ್ಧಿಸುವುದು. ಶಿಬಿರಾರ್ಥಿಗಳು ಪರಿಮಳ ತುಂಬಿದ ಬಂಗಾರದ ಹೂವಿನಂತೆ ಅರಳಬೇಕು. ನಮ್ಮಲ್ಲಿ ಸತ್‍ಸಂಕಲ್ಪವಿದ್ದರೆ ಬದುಕೂ ಬಂಗಾರವಾಗುವುದು. ಈ ಮೂಲಕ ಭವ್ಯ ರಾಷ್ಟ್ರ ನಿರ್ಮಾಣದ ಸಂಕಲ್ಪವು ಸಾಕಾರಗೊಳ್ಳುವುದು.” ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಆಶ್ರಯದಲ್ಲಿ ಜರಗಿದ ಶರದೃತು ಸಂಸ್ಕಾರ […]

Read More

“ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ” – ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶರದೃತು ಸಂಸ್ಕಾರ ಶಿಬಿರ 2021 ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ

ಅ.11: “ಮಕ್ಕಳೆಲ್ಲರೂ ಸಾಮಾನ್ಯರಲ್ಲ, ಅಸಾಮಾನ್ಯರು. ಭವ್ಯ ಭಾರತ ನಿರ್ಮಾಣದ ರೂವಾರಿಗಳು. ದೇಶ ಪ್ರೇಮ ಹೇಗೆ ಬೆಳೆಸಿಕೊಳ್ಳಬೇಕು? ಬದುಕನ್ನು ರೂಪಿಸಲು ಬೇಕಾದಂತಹ ವಿಚಾರಗಳು ತಿಳಿಯಬೇಕಾದರೆ ಸಂಸ್ಕಾರ ಶಿಕ್ಷಣ ಅಗತ್ಯ. ಆ ಮೂಲಕ ಆದರ್ಶ ರಾಷ್ಟ್ರ ನಿರ್ಮಾಣವಾಗಬಹುದು. ಸಂಸ್ಕøತಿಯ ಅಂತರ್ಯವೇ ಸಂಸ್ಕಾರ. ಮಾತು ಎಂದರೆ ವ್ಯಕ್ತಿತ್ವದ ಕೈಗನ್ನಡಿ. ವ್ಯಕ್ತಿತ್ವ ವಿಕಸನವೇ ಶಿಬಿರದ ಮುಖ್ಯ ಉದ್ದೇಶ. ಮಾತು ಮನಸ್ಸು ಹತ್ತಿರವಾಗಿರುವಂತದ್ದು. ಮನಸ್ಸಿನ ಭಾವನೆ ಮುಖದಲ್ಲಿ ಅನಾವರಣಗೊಳ್ಳುವುದು. ಹೃದಯದ ಮಾತಿನಿಂದ ಸಂತೋಷವಿದೆ. ಮುಗ್ಧ ಮನಸ್ಸಿಗೆ ಭಗವಂತನೂ ಮೆಚ್ಚಿಕೊಳ್ಳುತ್ತಾನೆ. ಅಂತಹ ಮನಸ್ಸನ್ನು ಮಕ್ಕಳಲ್ಲಿ ಕಾಣಬಹುದು. […]

Read More

“ನಾವೆಲ್ಲರೂ ಧರ್ಮ ಸೇನಾನಿಗಳಾಗೋಣ” – ಶ್ರೀ ಲಲಿತಾ ಪಂಚಮಿ ಮಹೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ

ಅ.10: “ತ್ಯಾಗಪೂರ್ಣ ಸೇವೆಗೆ ಬಹಳ ಪ್ರಾಮುಖ್ಯತೆ ಇದೆ. ಧರ್ಮಾಚರಣೆಯ ಮೂಲಕ ಜಾಗೃತಗೊಳಿಸುವ ಕಾರ್ಯ ನಿರಂತರವಾಗಬೇಕು. ದೇಶದ ರಕ್ಷಣೆಗೆ ರಾಷ್ಟ್ರ ಸೇನಾನಿಗಳು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಆರೋಗ್ಯ ಸೇನಾನಿಗಳಂತೆ ನಾವೆಲ್ಲರೂ ಧರ್ಮ ಸೇನಾನಿಗಳಾಗೋಣ. ಸದಾಚಾರವಿಲ್ಲದೆ ಧರ್ಮವಿಲ್ಲ. ಸದಾಚಾರದಿಂದಲೇ ಆರೋಗ್ಯ, ಸಂಪತ್ತು ವೃದ್ಧಿ ಸಾಧ್ಯ. ಸಮಾಜದಲ್ಲಿ ಅನೇಕ ವಿಚಾರಗಳು ವೈರಲ್ ಆಗುವುದಿದೆ. ಆದರ್ಶ ಸಮಾಜ ನಿರ್ಮಾಣಕ್ಕೆ ಪೂರಕವಾದ ಧಾರ್ಮಿಕ ವಿಚಾರಗಳು ವೈರಲ್ ಆಗಬೇಕು. ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ನಮ್ಮಲ್ಲಿರಬೇಕು. ಸಮಾಜದ ಸ್ವಾಸ್ಥ್ಯ ಕಾಪಿಡುವ ಜೊತೆಗೆ ಧರ್ಮಶ್ರದ್ಧೆ ಕಡಿಮೆಯಾಗಬಾರದು. ಅಧ್ಯಾತ್ಮವನ್ನು […]

Read More

“ಪಾರದರ್ಶಕತೆಯ ವ್ಯವಹಾರದಿಂದ ಸಹಕಾರಿಯು ಯಶಸ್ಸನ್ನು ಸಾಧಿಸಬಹುದು”- ಒಡಿಯೂರು ಶ್ರೀ

“ಸಹಕಾರಿಯು ಯಶಸ್ಸು ಸಾಧಿಸಲು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ವ್ಯವಹಾರದಲ್ಲಿ ಒಂದು ಬಾಹ್ಯ ಮತ್ತು ಇನ್ನೊಂದು ಅಂತರಂಗದ ವ್ಯವಹಾರ. ಲೌಕಿಕ ಬದುಕಿನಲ್ಲಿ ಬಾಹ್ಯ ವ್ಯವಹಾರದೊಂದಿಗೆ ಹೃದಯ ಶ್ರೀಮಂತಿಕೆ ಬೆಳೆಸಿಕೊಂಡಾಗ ಒಳಿತನ್ನು ಕಾಣಲು ಸಾಧ್ಯ. ಇದರಲ್ಲಿ ಸಮಾಜಮುಖಿ ಚಿಂತನೆ ಮತ್ತು ಪರಿಶುದ್ಧತೆ ಇರಬೇಕು. ಅಧ್ಯಾತ್ಮದ ಬದುಕಿಗೆ ಒಂದೇ ಉದ್ದೇಶ, ಸಮಾಜೋದ್ಧಾರಕ್ಕೆ ವಿವಿಧೋದ್ದೇಶ ಬೇಕು. ಇವೆಲ್ಲವೂ ನಮ್ಮ ಮನಸ್ಸಿನ ಆಯ್ಕೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನ ನೀಡಿದರು. ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ […]

Read More

“ಮೋಹ ಕ್ಷಯವಾಗದೆ ಮೋಕ್ಷ ದೊರಕದು” – ಒಡಿಯೂರು ಶ್ರೀ

  “ಬದುಕಿನಲ್ಲಿ ಬುದ್ಧಿ-ಸಿದ್ಧಿ, ಲಾಭ-ಶುಭಕ್ಕೆ ಗಣಪತಿ ಆರಾಧನೆ ಅಗತ್ಯ. ಜಲಾಧಿಪತಿಯಾದಂತಹ ಗಣಪತಿಯನ್ನು ಅರಸಿನ, ಗೋಮಯದಲ್ಲಿಯೂ ತಯಾರು ಮಾಡಿ ಆರಾಧಿಸುವುದಿದೆ. ನಮ್ಮಲ್ಲಿ ದೇವತ್ವವನ್ನು ತುಂಬಿಸಿಕೊಳ್ಳುವುದೇ ಆರಾಧನೆಯ ಉದ್ದೇಶ. ಅರ್ಥ, ಕಾಮದ ಮೋಹದಿಂದಾಗಿ ಧರ್ಮವನ್ನು ಮರೆಯಬಾರದು. ಅದು ನಮ್ಮನ್ನು ಅಧಃಪತನಕ್ಕೆ ಕೊಂಡೊಯ್ಯುತ್ತದೆ. ಮೋಹ ಕ್ಷಯವಾಗದೆ ಮೋಕ್ಷ ದೊರಕದು. ನಮ್ಮನ್ನೆಲ್ಲ ಸಂರಕ್ಷಣೆ ಮಾಡುವವನೇ ಗಣಪತಿ. ವಿಶ್ವವನ್ನೇ ಆವರಿಸಿರುವಂತಹ ರೋಗ ಒಂದೆಡೆಯಾದರೆ ಆಡಂಬರ ಬೇಡ, ಭಕ್ತಿ ತುಂಬಿದ ಆರಾಧನೆ ಬೇಕೆನ್ನುವ ಇಚ್ಛೆ ಗಣಪತಿಯದಾಗಿದೆ. ಗಣಪತಿ ತತ್ತ್ವ ಶ್ರೇಷ್ಠವಾದದ್ದು” ಎಂದು ಪೂಜ್ಯ ಶ್ರೀ ಶ್ರೀ […]

Read More

ಶ್ರೀಮದ್ಭಗವದ್ಗೀತೆಯಿಂದ ಲೌಕಿಕ-ಅಲೌಕಿಕ ಬದುಕಿಗೆ ಬೆಳಕು – ಒಡಿಯೂರು ಶ್ರೀ

ಪ್ರಪನ್ನ ಪಾರಿಜಾತಾಯ ತೋತ್ರವೇತ್ರೈಕಪಾಣಯೇ | ಜ್ಞಾನಮುದ್ರಾಯ ಶ್ರೀಕೃಷ್ಣಾಯ ಗೀತಾಮೃತದುಹೇ ನಮಃ || ನಿಮಗೆಲ್ಲಾ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ನಿಮಗೆಲ್ಲಾ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಶ್ರೀಕೃಷ್ಣ ಅವತಾರದ ಹಿಂದೆ ಒಂದು ಸತ್ಯ ಅಡಗಿದೆ. ಅಧರ್ಮವು ತಾಂಡವವಾಡುವಾಗ ನಿಯಂತ್ರಿಸುವುದಕ್ಕೆ ಧರ್ಮದ ರೂಪದಲ್ಲಿ ಭಗವಂತ ಅವತಾರ ಎತ್ತುತ್ತಾನೆ. ಅದರಲ್ಲಿ ಕೃಷ್ಣಾವತಾರವೂ ಒಂದು. ಕೃಷ್ಣ ಎನ್ನುವಾಗ ನಮಗೆಲ್ಲ ಮೂಡುವ ಚಿತ್ರ ಆಕರ್ಷಣೆ ಮತ್ತು ಕುತೂಹಲ. ಕೃಷ್ಣನೆಂದರೆ ಆಕರ್ಷಣೆಯ ದೇವರು. ಕ್ಷಣ-ಕ್ಷಣದಲ್ಲೂ ಧರ್ಮವನ್ನು ಉದ್ಧರಿಸುವ, ಅಧರ್ಮವನ್ನು ಮೆಟ್ಟಿ ನಿಲ್ಲುವ ಚಿತ್ರಣಗಳು ಕಂಡುಬರುತ್ತದೆ.  […]

Read More

ಮಾನವೀಯತೆಯ ಕೊಂಡಿ ಬಲಪಡಿಸುವ ಕಾರ್ಯವಾಗಬೇಕು

ಷಷ್ಠ್ಯಬ್ದ ಸಂಭ್ರಮ ಸಮಿತಿ, ಮಾಣಿ ವಲಯದ ಪ್ರಯುಕ್ತ ‘ಮನೆಗೊಂದು ಶ್ರೀಗಂಧದ ಸಸಿ – ಶ್ರೀಗಂಧ ಬೆಳೆಯೋಣ’ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಆಶೀರ್ವಚನ ಕೆದಿಲ, ಜು.25: “ನಿರ್ದಿಷ್ಟವಾದ ನಿಯಮಗಳನ್ನು ಪಾಲಿಸಿ ಬದುಕನ್ನು ರೂಪಿಸಬೇಕು. ಯುವಶಕ್ತಿ ಸದಾಚಾರದ ಒಲವನ್ನು ಹೊಂದಿದೆ. ಅದನ್ನು ಬೆಂಬಲಿಸಿ, ಸಮಾಜ ಪರಿವರ್ತನೆಯಾಗುವಂತೆ ಪ್ರೇರೇಪಿಸಬೇಕು. ಮಾನವೀಯತೆಯ ಕೊಂಡಿ ಸಡಿಲವಾಗಿದೆ. ಅದನ್ನು ಬಲಪಡಿಸುವ ಮಹತ್ ಕಾರ್ಯವಾಗಬೇಕು. ಸುಸಂಸ್ಕøತ ಸಮಾಜ ನಿರ್ಮಾಣವಾಗಬೇಕು. ಅರ್ಹರಿಗೆ ಉಪಕರಿಸಬೇಕು. ಹುಟ್ಟು-ಸಾವು ಜಗತ್ತಿನ ನಿಯಮ. ಆಯುಷ್ಯವಿರುವ ಪರಿಪೂರ್ಣ ಆರೋಗ್ಯ ಹೊಂದಿದ ವ್ಯಕ್ತಿಗೆ ಬದುಕನ್ನು ಶ್ರೇಷ್ಠವಾಗಿಸಲು ಸಾಧ್ಯವಾಗುತ್ತದೆ” […]

Read More

ಯಶಸ್ಸಿನ ಗುಟ್ಟು ಪ್ರಯತ್ನಶೀಲತೆಯಲ್ಲಿ ಅಡಗಿದೆ

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆಯ ಸಂದರ್ಭ ಒಡಿಯೂರು ಶ್ರೀ ಆಶೀರ್ವಚನ” “ಜಗತ್ತು ನಿಯಮವನ್ನು ಅದೇ ರೂಪಿಸುತ್ತಿದೆ. ಅದಕ್ಕೆ ನಾವು ಒಗ್ಗಿಕೊಳ್ಳಬೇಕು. ನಮ್ಮಲ್ಲಿ ಇಚ್ಛಾ ಶಕ್ತಿ, ಕ್ರಿಯಾ ಶಕ್ತಿ ಇದ್ದರೆ ಸಾಲದು ಜ್ಞಾನ ಶಕ್ತಿಯೂ ಬೇಕು. ನಮ್ಮ ನಾಲಿಗೆಯ ತುದಿಯಂತೆ ಲಕ್ಷ್ಮೀಯು ಚಲನಶೀಲವಾಗಿರುವಳು. ಸಂಪತ್ತು ಮತ್ತು ಆಪತ್ತು ನಮ್ಮ ನಾಲಿಗೆಯಲ್ಲಿದೆ. ಅದಕ್ಕಾಗಿ ವಾಕ್ ಸರಿಯಾಗಿದ್ದರೆ ಲಕ್ಷ್ಮೀ ಒಲಿಯುತ್ತಾಳೆ. ಸತ್ಯವನ್ನು ಅನುಸರಿಸಿ ಬಂದ ಸಂಪತ್ತಿನಿಂದ ಆಪತ್ತಿಲ್ಲ. ತೃಪ್ತಿಯ ಮೂಲದಲ್ಲಿ ಲಕ್ಷ್ಮೀ ಇರುವಳು. ಸಂತೃಪ್ತಿಯೇ ಸಂಪತ್ತು. ಇದ್ದುದರಲ್ಲಿ […]

Read More

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ – ಎಸ್.ಎಸ್.ಎಲ್.ಸಿ. ಆಂಗ್ಲ ಮಾಧ್ಯಮ ಶಾಲೆ 100% ಫಲಿತಾಂಶ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆ 100% ಫಲಿತಾಂಶ ದಾಖಲಿಸಿದ್ದು, ದೀಪಶ್ರೀ – 619 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಮೈತ್ರಿ ಕೆ. – 605, ಶ್ರೇಯಸ್ – 603, ಹರ್ಷಿತಾ ಡಿ’ಸೋಜ – 601, ಪ್ರಥಮ್ ಶೆಟ್ಟಿ – 598, ಶೃಜನ್ ಸಿ.- 593, ರಜತ್ – 585, ಸ್ಮಿತಾ ಕೆ. – 584, ದಿವ್ಯಲಕ್ಷ್ಮೀ – 578, ಅನಿಶ್ – 575, ನಿಕೇಶ್ ಬಿ – […]

Read More

“ದೇಶದ ಸಂಸ್ಕೃತಿಯನ್ನು ಯುವಪೀಳಿಗೆಗೆ ಹಸ್ತಾಂತರಿಸುವ ಕಾರ್ಯವಾಗಲಿ” ಸ್ವಾತಂತ್ರ್ಯ ದಿನಾಚರಣೆ – ಧ್ವಜಾರೋಹಣಗೈದು – ಒಡಿಯೂರು ಶ್ರೀ ಸಂದೇಶ

“ಭಾರತ ಎನ್ನುವ ಹೆಸರಿನಲ್ಲಿಯೇ ಅದರ ಸಂಸ್ಕøತಿ ಅಡಗಿದೆ. ನಾವೆಲ್ಲ ಅಮೃತಪುತ್ರರು. ನಮಗೆಲ್ಲ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುವ ಯೋಗ ಸಿಕ್ಕಿದೆ. ಈ ಸಂದರ್ಭ ದೇಶಕ್ಕಾಗಿ ಬಲಿದಾನಗೈದ ಸೈನಿಕರನ್ನು ಸ್ಮರಿಸುವುದೂ ನಮ್ಮ ಕರ್ತವ್ಯ. ಭಾರತ ದೇಶದ ಮೌಲ್ಯಗಳನ್ನು ಉಳಿಸಲು ದೇಶದ ಸಂಸ್ಕøತಿಯನ್ನು ಯುವಪೀಳಿಗೆಗೆ ಹಸ್ತಾಂತರಿಸುವ ಕಾರ್ಯವಾಗಬೇಕು. ಯುವಕರಲ್ಲಿ ರಾಷ್ಟ್ರಪ್ರೇಮದ ಬೀಜ ಬಿತ್ತಬೇಕು. ದುಶ್ಚಟಮುಕ್ತ ಸಮಾಜವಾಗಬೇಕಾದರೆ ಯುವಕರು ಜಾಗೃತರಾಗಬೇಕು. ವ್ಯಕ್ತಿ ವ್ಯಕ್ತಿತ್ವಪೂರ್ಣವಾಗಿದ್ದಾಗ ಆದರ್ಶ ರಾಷ್ಟ್ರ ನಿರ್ಮಾಣ ಸಾಧ್ಯ. ರಾಮ ಎಂದರೆ ರಾಷ್ಟ್ರ. ರಾಷ್ಟ್ರ ಎಂದರೆ ರಾಮ. ರಾಮ ಪ್ರೇಮದ ಜೊತೆಗೆ […]

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top