+91 8255-266211
info@shreeodiyoor.org

ಒಡಿಯೂರು: ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ

ಒಡಿಯೂರು, ದ.12: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.12-12-2021ರಿಂದ ತಾ.18-12-2021ರ ತನಕ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ನಡೆಯಲಿರುವ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹಕ್ಕೆ ಪೂಜ್ಯ ಶ್ರೀಗಳವರು ದೀಪೋಜ್ವಲನದ ಮೂಲಕ ಚಾಲನೆ ನೀಡಿದರು. ಗುರುಭಕ್ತರಿಗೆ ಶ್ರೀದತ್ತ ಮಾಲಾಧಾರಣೆ ಮಾಡಿ ಅನುಗ್ರಹ ಸಂದೇಶ ನೀಡಿದ ಪೂಜ್ಯ ಶ್ರೀಗಳವರು “ಶ್ರೀ ದತ್ತಮಾಲಾಧಾರಣೆ-ಸಪ್ತಾಹ ವೃತಾಚರಣೆ ಜೀವನಮೌಲ್ಯ ವರ್ಧನೆಗೆ ಪೂರಕ. ಕರ್ಮ ನಡೆಸುವವರಲ್ಲಿ ಪಾಪ-ಪುಣ್ಯದ ಲೇಪವಿರುವುದು. ಸತ್ಕರ್ಮದಿಂದ ಪುಣ್ಯ […]

Read More

‘ಚಲನಶೀಲ ಬದುಕಿಗೆ ಆಧ್ಯಾತ್ಮದ ಬೆಳಕು ಅವಶ್ಯ’ – ಪೂಜ್ಯ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮದ ಕಾರ್ಯಕ್ರಮಗಳ ಸಮಾಲೋಚನಾ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ

ಒಡಿಯೂರು, ನ.05: “ಜನಸೇವೆಯೇ ಜನಾರ್ದನ ಸೇವೆ. ಮನುಷ್ಯನ ಬದುಕಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಾನವೀಯ ಮೌಲ್ಯವರ್ಧನೆಗೆ ಪೂರಕವಾಗಿ ಜ್ಞಾನವಾಹಿನಿ ನಿರಂತರ ನಡೆಯಲು ಚಾಲನೆ ನೀಡಿದ್ದೇವೆ. ಸುಖ-ದುಃಖವನ್ನು ಹಂಚಿ ಬಾಳಬೇಕು. ಇದರ ಸಮತೋಲನಕ್ಕೆ ಅಧ್ಯಾತ್ಮ ನಮಗೆ ಮುಖ್ಯ. ಚಲನಶೀಲ ಬದುಕಿಗೆ ಆಧ್ಯಾತ್ಮದ ಬೆಳಕು ಬೇಕು. ನಾವೆಲ್ಲರೂ ಒಂದೊಂದು ಬೆಳಕಾಗಬೇಕು. ಅಂಧಾಕಾರದ ಮಸಿಯನ್ನು ತೆಗೆದಾಗ ಅಧ್ಯಾತ್ಮದ ಬೆಳಕು ಬೆಳಗುತ್ತದೆ. ಜ್ಞಾನದ ಬೆಳಕು ಎಲ್ಲರಲ್ಲೂ ಬೆಳಗಲಿ” ಎಂದು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಜರಗಿದ ಪೂಜ್ಯ ಒಡಿಯೂರು […]

Read More

“ವೈದ್ಯ ಮಾರ್ಗಕ್ಕೆ ಪ್ರವರ್ತಕರೇ ಶ್ರೀ ಧನ್ವಂತರೀ ದೇವರು” – ಒಡಿಯೂರು ಶ್ರೀ

ನ.02: “ವೈದ್ಯಮಾರ್ಗಕ್ಕೆ ಪ್ರವರ್ತಕರೇ ವಿಷ್ಣುವಿನ ಅವತಾರಿ ಶ್ರೀ ಧನ್ವಂತರೀ ದೇವರು. ವಾತ, ಪಿತ್ತ, ಕಫಗಳಿಂದ ಬರುವ ರೋಗಗಳಿಗೆ ಧನ್ವಂತರೀ ದೇವರ ಆರಾಧನೆಯಿಂದ ಪರಿಹಾರ ಪ್ರಾಪ್ತಿಯಾಗುತ್ತದೆ. ನಮ್ಮ ಮನಸ್ಸಿಗೆ ಮತ್ತು ಆಹಾರಕ್ಕೆ ನಿಕಟವಾದ ಸಂಬಂಧವಿದೆ. ಆಹಾರವನ್ನು ಸೇವಿಸುವಾಗ ಔಷಧವೆಂದೇ ಭಾವಿಸಬೇಕು. ಆಗ ಮಾತ್ರ ಶರೀರದ ಬೆಳವಣಿಗೆಗೆ ಪೂರಕವಾಗುತ್ತದೆ. ಹಿತ-ಮಿತ-ಋತುಗಳಿಗೆ ಸರಿಯಾಗಿ ಉಣ್ಣುವುದರಿಂದ ಆದಿ-ವ್ಯಾದಿಗಳಿಗೆ ಕಡಿವಾಣ ಹಾಕಬಹುದು; ಆರೋಗ್ಯವನ್ನೂ ಕಾಪಿಡಬಹುದು. ಈ ಸಂಬಂಧವಾಗಿ ಶಾಸ್ತ್ರ-ಪುರಾಣಗಳಲ್ಲಿ ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ. ಅದನ್ನು ಪಾಲನೆ ಮಾಡಿದಾಗ ಸಾರ್ಥಕ ಬದುಕು ನಮ್ಮದಾಗಬಹುದು. ಶ್ರೀ ಧನ್ವಂತರೀ […]

Read More

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಧನ್ವಂತರೀ ಹವನ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನ.2ರಂದು ಮಂಗಳವಾರ ಬೆಳಿಗ್ಗೆ ಶ್ರೀ ಧನ್ವಂತರಿ ಜಯಂತಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ಧನ್ವಂತರೀ ಹವನ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವುದು.

Read More

“ಅಂತರಂಗದ ಆನಂದ ಅನುಭವಿಸಲು ಅಂತರ್‍ದೃಷ್ಟಿ ಅವಶ್ಯ” – ಒಡಿಯೂರು ಶ್ರೀ

ಕನ್ಯಾನದಲ್ಲಿ ಬೃಹತ್ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ “ಪಂಚೇಂದ್ರಿಯಗಳಲ್ಲಿ ಶ್ರೇಷ್ಠವಾದುದು ಕಣ್ಣು. ಆಧುನಿಕ ಉಪಕರಣಗಳ ಬಳಕೆಯಿಂದ ಕಣ್ಣಿನ ಸಮಸ್ಯೆಗಳು ಅತಿಯಾಗಿದೆ. ಬಾಹ್ಯ ಕಣ್ಣಿಗಿಂತ ಜ್ಞಾನದ ದೃಷ್ಟಿ ಅಗತ್ಯವಾಗಿ ಮನುಷ್ಯನಿಗೆ ಬೇಕು. ಅಂತರಂಗದ ಆನಂದ ಅನುಭವಿಸಲು ಅಂತರ್‍ದೃಷ್ಟಿಯು ಅವಶ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕನ್ಯಾನ ಶ್ರೀ ಗುರುದೇವ ಕಲ್ಯಾಣ ಮಂಟಪದಲ್ಲಿ ಜರಗಿದ ಬೃಹತ್ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ […]

Read More

ಒಡಿಯೂರು ಶ್ರೀಗಳವರ ಮುಂಬೈ ಪ್ರವಾಸ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಅಕ್ಟೋಬರ 27 ಮತ್ತು 28ರಂದು ಮುಂಬೈ ಪ್ರವಾಸದಲ್ಲಿರುತ್ತಾರೆ. ಸದ್ರಿ ದಿನಗಳಲ್ಲಿ ಸಾರ್ವಜನಿಕ ಭೇಟಿಗೆ ಶ್ರೀ ಸಂಸ್ಥಾನದಲ್ಲಿ ಲಭ್ಯರಿರುವುದಿಲ್ಲ.

Read More

“ಕರ್ತವ್ಯನಿಷ್ಠೆ ಸಾಧನೆಯ ಬದುಕಿಗೆ ಹೆದ್ದಾರಿ” – ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕøತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ

“ಭಜನೆ ಎಂದರೆ ಸಂಘಟನೆ ಅಥವಾ ಸೇರುವಿಕೆಯೇ ಆಗಿದೆ. ಭಜನೆ ಮಾಡುವ ಹೃದಯದಲ್ಲಿ ರಾಗ-ದ್ವೇಷಗಳಿರುವುದಿಲ್ಲ. ನಮ್ಮಲ್ಲಿ ಸಾತ್ವಿಕಭಾವವನ್ನು ಮೂಡಿಸುತ್ತದೆ. ಭಜನೆ ಮಾಡುವ ಮನೆ ಅಥವಾ ಊರಲ್ಲಿ ಶಾಂತಿ-ನೆಮ್ಮದಿ ಇರುವುದು. ಭಜನೆಯಲ್ಲಿನ ಸಾರವು ಬದುಕನ್ನೆ ಪರಿವರ್ತಿಸುತ್ತದೆ. ಅನ್ಯೋನ್ಯತೆ-ಆತ್ಮೀಯತೆ ಬೆಸೆಯಲು ಇದು ಪೂರಕ. ಯಾರಿಗೆ ಹೇಗೆ ಸಹಕಾರ ಮಾಡಬೇಕೆನ್ನುವ ವಿಚಾರವನ್ನು ಭಜನೆ ತಿಳಿಸುತ್ತದೆ. ನಮ್ಮ ಜೀವನದಲ್ಲಿ ಎಲ್ಲವನ್ನೂ ಪುನಃ ಪುನಃ ಪಡೆಯಬಹುದು. ಆದರೆ ಶರೀರವನ್ನು ಮತ್ತೆ ಮತ್ತೆ ಪಡೆಯಲಾಗದು. ಸದ್ವಿಚಾರಗಳು ಬದುಕನ್ನು ಸಂಪನ್ನವಾಗಿಸುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು […]

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top